<p><strong>ಲಂಡನ್</strong>: ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತ ಮೂಲದ 23 ವರ್ಷದ ವಿದ್ಯಾರ್ಥಿ ಇಲ್ಲಿನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. </p><p>ಮೃತ ವಿದ್ಯಾರ್ಥಿಯನ್ನು ಮಿತ್ಕೂರ್ ಪಟೇಲ್ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ಗೆ ಬಂದಿದ್ದರು. ನವೆಂಬರ್ 17ರಿಂದ ಆತ ಕಾಣೆಯಾಗಿದ್ದ.</p><p>ಪೂರ್ವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿಯ ಥೇಮ್ಸ್ ನದಿಯಲ್ಲಿ ಪತ್ತೆಯಾದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಸಾವು ಸಂಶಯಾಸ್ಪದವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p><p> ಮಿತ್ಕೂರ್ ಪಟೇಲ್ ಅವರ ಸಂಬಂಧಿ ಪಾರ್ಥ ಪಟೇಲ್ ದೇಣಿಗೆ ಸಂಗ್ರಹಣೆ ಆರಂಭಿಸಿದ್ದು, ಈವರೆಗೆ ಅವರು 4,000 ಪೌಂಡ್ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.</p><p>‘ರೈತಾಪಿ ಕುಟುಂಬದಿಂದ ಬಂದಿರುವ ಪಟೇಲ್, ನವೆಂಬರ್ 17, 2023ರಿಂದ ಕಾಣೆಯಾಗಿದ್ದಾರೆ. ಈಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದು ಅತ್ಯಂತ ದುಃಖಕರ ವಿಷಯ. ದೇಣಿಗೆ ಸಂಗ್ರಹಿಸಿ ಅವರ ಕುಟುಂಬಕ್ಕೆ ನೆರವು ನೀಡಲು ಇಚ್ಛಿಸುತ್ತಿದ್ದೇನೆ’ ಎಂದು ಪಾರ್ಥ ಪಟೇಲ್ ಹೇಳಿದ್ದಾರೆ. </p><p>ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಅಮೆಜಾನ್ನಲ್ಲಿ ಅರೆಕಾಲಿಕ ಕೆಲಸವನ್ನು ಪ್ರಾರಂಭಿಸಲು ಶೇಫೀಲ್ಡ್ಗೆ ತೆರಳಬೇಕಿತ್ತು. ಆದರೆ, ಲಂಡನ್ನಲ್ಲಿ ದೈನಂದಿನ ವಾಕಿಂಗ್ಗೆ ತೆರಳಿದ್ದ ಪಟೇಲ್ ಹಿಂದಿರುಗಿರಲಿಲ್ಲ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್</strong>: ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತ ಮೂಲದ 23 ವರ್ಷದ ವಿದ್ಯಾರ್ಥಿ ಇಲ್ಲಿನ ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. </p><p>ಮೃತ ವಿದ್ಯಾರ್ಥಿಯನ್ನು ಮಿತ್ಕೂರ್ ಪಟೇಲ್ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ಗೆ ಬಂದಿದ್ದರು. ನವೆಂಬರ್ 17ರಿಂದ ಆತ ಕಾಣೆಯಾಗಿದ್ದ.</p><p>ಪೂರ್ವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿಯ ಥೇಮ್ಸ್ ನದಿಯಲ್ಲಿ ಪತ್ತೆಯಾದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಸಾವು ಸಂಶಯಾಸ್ಪದವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p><p> ಮಿತ್ಕೂರ್ ಪಟೇಲ್ ಅವರ ಸಂಬಂಧಿ ಪಾರ್ಥ ಪಟೇಲ್ ದೇಣಿಗೆ ಸಂಗ್ರಹಣೆ ಆರಂಭಿಸಿದ್ದು, ಈವರೆಗೆ ಅವರು 4,000 ಪೌಂಡ್ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.</p><p>‘ರೈತಾಪಿ ಕುಟುಂಬದಿಂದ ಬಂದಿರುವ ಪಟೇಲ್, ನವೆಂಬರ್ 17, 2023ರಿಂದ ಕಾಣೆಯಾಗಿದ್ದಾರೆ. ಈಗ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದು ಅತ್ಯಂತ ದುಃಖಕರ ವಿಷಯ. ದೇಣಿಗೆ ಸಂಗ್ರಹಿಸಿ ಅವರ ಕುಟುಂಬಕ್ಕೆ ನೆರವು ನೀಡಲು ಇಚ್ಛಿಸುತ್ತಿದ್ದೇನೆ’ ಎಂದು ಪಾರ್ಥ ಪಟೇಲ್ ಹೇಳಿದ್ದಾರೆ. </p><p>ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಅಮೆಜಾನ್ನಲ್ಲಿ ಅರೆಕಾಲಿಕ ಕೆಲಸವನ್ನು ಪ್ರಾರಂಭಿಸಲು ಶೇಫೀಲ್ಡ್ಗೆ ತೆರಳಬೇಕಿತ್ತು. ಆದರೆ, ಲಂಡನ್ನಲ್ಲಿ ದೈನಂದಿನ ವಾಕಿಂಗ್ಗೆ ತೆರಳಿದ್ದ ಪಟೇಲ್ ಹಿಂದಿರುಗಿರಲಿಲ್ಲ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>