ಏಕಕಾಲಕ್ಕೆ ಎಲ್ಲರನ್ನೂ ರಕ್ಷಿಸುವುದು ಅಸಾಧ್ಯ. ಉತ್ತಮ ಸ್ಥಿತಿಯಲ್ಲಿರುವವರನ್ನು ಮಾತ್ರ ಒಬ್ಬೊಬ್ಬರನ್ನಾಗಿ ಹೊರಗೆ ಕರೆತರಬಹುದು ಎಂದು ಚಿಯಾಂಗ್ ರೈ ಪ್ರಾಂತ್ಯದ ಗವರ್ನರ್ ನರೋಂಗ್ಸಕ್ ತಿಳಿಸಿದ್ದಾರೆ. ಪ್ರತಿ ದಿನ ಬಾಲಕರ ಸ್ಥಿತಿಗತಿ ಗಮನಿಸಿ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಅಪಾಯವಿದ್ದರೆ ರಕ್ಷಣಾ ಕಾರ್ಯ ಮುಂದುವರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.