<p><strong>ಇಸ್ಲಾಮಾಬಾದ್:</strong> ದಶಕಗಳಿಂದ ಬೀಗ ಹಾಕಿ ಸಂರಕ್ಷಿಸಿಡಲಾಗಿದ್ದ ಭಗವಾನ್ ಬುದ್ಧನ ಶಿರದ ಅಪರೂಪದ ಪ್ರತಿಮೆಯನ್ನು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯವು ಪ್ರದರ್ಶನಕ್ಕೆ ಇಟ್ಟಿದೆ.</p>.<p>ಗಾರೆಶಿಲ್ಪದಲ್ಲಿ ಮಾಡಲಾಗಿರುವ ಬುದ್ದನ ಶಿರದ ಪ್ರತಿಮೆಯನ್ನು 1997ರಲ್ಲಿ ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿತ್ತು.</p>.<p>ಪ್ರತಿಮೆಯು ಕ್ರಿ.ಶ. 3ರಿಂದ 4ನೇ ಶತಮಾನದ್ದಾಗಿದೆ. 60ರ ದಶಕದಲ್ಲಿ ಸ್ವಾತ್ ಕಣಿವೆಯಲ್ಲಿ ನಡೆದ ಉತ್ಖನನದಲ್ಲಿ ಇಟಾಲಿಯನ್ ಪುರಾತತ್ವ ಮಿಷನ್ ಇದನ್ನು ಪತ್ತೆ ಹಚ್ಚಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.</p>.<p>‘ಸ್ವಾತ್ ಕಣಿವೆಯು ಪ್ರಧಾನವಾಗಿ ಕಲ್ಲಿನ ಶಿಲ್ಪಗಳ ನೆಲೆಯಾಗಿದೆ. ಅದರಲ್ಲಿ ಗಾರೆಶಿಲ್ಪದಿಂದ ಮಾಡಲಾಗಿರುವ ಭಗವಾನ್ ಬುದ್ಧನ ಪ್ರತಿಮೆಗಳು ಕಂಡು<br />ಬರುವುದು ಅಪರೂಪ. ವಸ್ತುಸಂಗ್ರಹಾಲಯದಲ್ಲಿ ಇಡಲಾಗಿರುವ ಬುದ್ಧನ ಶಿರದ ಪ್ರತಿಮೆಯು ಅಪರೂಪದ ಗಾರೆಶಿಲ್ಪ ಪ್ರತಿಮೆಯಾಗಿದೆ. ಈ ರೀತಿಯ ಗಾರೆಶಿಲ್ಪ ಪ್ರತಿಮೆಗಳು ತಕ್ಷಶಿಲಾ ಮತ್ತು ಅಘ್ಗಾನಿಸ್ತಾನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ’ ಎಂದು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯದ ನಿರ್ದೇಶಕ ಡಾ.ಅಬ್ದುಲ್ ಗಫೂರ್ ಲೋನ್ ವಿವರಿಸಿದ್ದಾರೆ.</p>.<p>‘ಸಾಮಾನ್ಯವಾಗಿ ಬುದ್ಧನ ಪ್ರತಿಮೆಯಲ್ಲಿ ತಲೆಕೂದಲನ್ನು ಹಿಂದಕ್ಕೆ ಕಟ್ಟಲಾಗಿದ್ದು, ನೇರವಾದ ಕಣ್ಣುಗಳಿರುತ್ತವೆ. ಆದರೆ, ಈ ಗಾರೆಶಿಲ್ಪದಲ್ಲಿ ತಲೆಕೂದಲನ್ನು ಹಿಂದಕ್ಕೆ ತುರುಬಿನ ಮಾದರಿಯಲ್ಲಿ ಕೆತ್ತಲಾಗಿದ್ದು, ಉದ್ದನೆಯ ಕಣ್ಣುಗಳಿದ್ದು, ಶಿಲ್ಪದಲ್ಲಿ ಸ್ತ್ರೀ ಲಕ್ಷಣಗಳಿವೆ’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ದಶಕಗಳಿಂದ ಬೀಗ ಹಾಕಿ ಸಂರಕ್ಷಿಸಿಡಲಾಗಿದ್ದ ಭಗವಾನ್ ಬುದ್ಧನ ಶಿರದ ಅಪರೂಪದ ಪ್ರತಿಮೆಯನ್ನು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯವು ಪ್ರದರ್ಶನಕ್ಕೆ ಇಟ್ಟಿದೆ.</p>.<p>ಗಾರೆಶಿಲ್ಪದಲ್ಲಿ ಮಾಡಲಾಗಿರುವ ಬುದ್ದನ ಶಿರದ ಪ್ರತಿಮೆಯನ್ನು 1997ರಲ್ಲಿ ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿತ್ತು.</p>.<p>ಪ್ರತಿಮೆಯು ಕ್ರಿ.ಶ. 3ರಿಂದ 4ನೇ ಶತಮಾನದ್ದಾಗಿದೆ. 60ರ ದಶಕದಲ್ಲಿ ಸ್ವಾತ್ ಕಣಿವೆಯಲ್ಲಿ ನಡೆದ ಉತ್ಖನನದಲ್ಲಿ ಇಟಾಲಿಯನ್ ಪುರಾತತ್ವ ಮಿಷನ್ ಇದನ್ನು ಪತ್ತೆ ಹಚ್ಚಿತ್ತು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.</p>.<p>‘ಸ್ವಾತ್ ಕಣಿವೆಯು ಪ್ರಧಾನವಾಗಿ ಕಲ್ಲಿನ ಶಿಲ್ಪಗಳ ನೆಲೆಯಾಗಿದೆ. ಅದರಲ್ಲಿ ಗಾರೆಶಿಲ್ಪದಿಂದ ಮಾಡಲಾಗಿರುವ ಭಗವಾನ್ ಬುದ್ಧನ ಪ್ರತಿಮೆಗಳು ಕಂಡು<br />ಬರುವುದು ಅಪರೂಪ. ವಸ್ತುಸಂಗ್ರಹಾಲಯದಲ್ಲಿ ಇಡಲಾಗಿರುವ ಬುದ್ಧನ ಶಿರದ ಪ್ರತಿಮೆಯು ಅಪರೂಪದ ಗಾರೆಶಿಲ್ಪ ಪ್ರತಿಮೆಯಾಗಿದೆ. ಈ ರೀತಿಯ ಗಾರೆಶಿಲ್ಪ ಪ್ರತಿಮೆಗಳು ತಕ್ಷಶಿಲಾ ಮತ್ತು ಅಘ್ಗಾನಿಸ್ತಾನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ’ ಎಂದು ಇಸ್ಲಾಮಾಬಾದ್ ವಸ್ತುಸಂಗ್ರಹಾಲಯದ ನಿರ್ದೇಶಕ ಡಾ.ಅಬ್ದುಲ್ ಗಫೂರ್ ಲೋನ್ ವಿವರಿಸಿದ್ದಾರೆ.</p>.<p>‘ಸಾಮಾನ್ಯವಾಗಿ ಬುದ್ಧನ ಪ್ರತಿಮೆಯಲ್ಲಿ ತಲೆಕೂದಲನ್ನು ಹಿಂದಕ್ಕೆ ಕಟ್ಟಲಾಗಿದ್ದು, ನೇರವಾದ ಕಣ್ಣುಗಳಿರುತ್ತವೆ. ಆದರೆ, ಈ ಗಾರೆಶಿಲ್ಪದಲ್ಲಿ ತಲೆಕೂದಲನ್ನು ಹಿಂದಕ್ಕೆ ತುರುಬಿನ ಮಾದರಿಯಲ್ಲಿ ಕೆತ್ತಲಾಗಿದ್ದು, ಉದ್ದನೆಯ ಕಣ್ಣುಗಳಿದ್ದು, ಶಿಲ್ಪದಲ್ಲಿ ಸ್ತ್ರೀ ಲಕ್ಷಣಗಳಿವೆ’ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>