<p><strong>ಜೆರುಸೆಲೇಂ</strong>: ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ಇಸ್ರೇಲ್ ಕಟ್ಟಡ ನಿರ್ಮಾಣ ಉದ್ಯಮವು ಈಗ ಭಾರತಕ್ಕೆ ಮೊರೆ ಹೋಗಿದೆ.</p>.<p>ಸಾವಿರಾರು ಕಾರ್ಮಿಕರನ್ನು ಭಾರತದಿಂದ ಇಸ್ರೇಲ್ಗೆ ಕರೆತರಲಿಕ್ಕಾಗಿಯೇ ಆಯ್ಕೆದಾರರ ತಂಡವೊಂದು ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಮುಂದಿನ ವಾರ ಮತ್ತೊಂದು ತಂಡ ಭೇಟಿ ನೀಡಲಿದೆ ಎಂದು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ ಬುಧವಾರ ತಿಳಿಸಿದೆ.</p>.<p>‘ದೆಹಲಿ, ಚೆನ್ನೈನಲ್ಲಿ ಡಿ.27ರಂದು ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ. 10 ಸಾವಿರ ಕಾರ್ಮಿಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಈ ಸಂಖ್ಯೆ 30 ಸಾವಿರದ ತನಕವೂ ಹೆಚ್ಚಬಹುದು. 10–15 ದಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದು ಹಲವು ತಿಂಗಳವರೆಗೂ ಮುಂದುವರಿಯಬಹುದು’ ಎಂದು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ನ (ಐಬಿಎ) ವಕ್ತಾರರೂ ಆಗಿರುವ ಉಪ ಮಹಾನಿರ್ದೇಶಕ ಶೇ ಪೌಜ್ನರ್ ತಿಳಿಸಿದ್ದಾರೆ.</p>.<p>’ಕಾರ್ಮಿಕರ ಸಮಸ್ಯೆಗಳು ಮತ್ತು ಆಯ್ಕೆ ತಂಡವನ್ನು ನಿಭಾಯಿಸುವ ಐಬಿಎ ವಿಭಾಗದ ಮುಖ್ಯಸ್ಥ ಇಜಾಕ್ ಗುರ್ವಿಟ್ ನೇತೃತ್ವದ ನಿಯೋಗ ಕಳೆದ ವಾರ ಭಾರತದಲ್ಲಿತ್ತು. ಮುಂದಿನ ವಾರ ಐಬಿಎ ತಂಡದ ಇತರ ಸದಸ್ಯರೊಂದಿಗೆ ಸಿಇಒ ಇಗಲ್ ಸ್ಲೋವಿಕ್ ಕಾರ್ಮಿಕರ ನೇಮಕಾತಿಗಾಗಿಯೇ ಭೇಟಿ ನೀಡಲಿದ್ದಾರೆ. ಈ ನಿಯೋಗದೊಂದಿಗೆ ನಿರ್ಮಾಣ ಮತ್ತು ವಸತಿ ಸಚಿವಾಲಯದ ಮಹಾನಿರ್ದೇಶಕ ಯೆಹುದಾ ಮೊರ್ಗೆನ್ಸ್ಟೆರ್ನ್ ಕೂಡ ಇರಲಿದ್ದಾರೆ ಎಂದು ಅವರು ಹೇಳಿದರು.</p>.<p>‘ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಭಾರತದಿಂದ ಕಾರ್ಮಿಕರನ್ನು ಕರೆತರುವ ಕುರಿತಂತೆ ಚರ್ಚಿಸಿದ್ದಾರೆ’ ಎಂದು ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೆರುಸೆಲೇಂ</strong>: ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ಇಸ್ರೇಲ್ ಕಟ್ಟಡ ನಿರ್ಮಾಣ ಉದ್ಯಮವು ಈಗ ಭಾರತಕ್ಕೆ ಮೊರೆ ಹೋಗಿದೆ.</p>.<p>ಸಾವಿರಾರು ಕಾರ್ಮಿಕರನ್ನು ಭಾರತದಿಂದ ಇಸ್ರೇಲ್ಗೆ ಕರೆತರಲಿಕ್ಕಾಗಿಯೇ ಆಯ್ಕೆದಾರರ ತಂಡವೊಂದು ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಮುಂದಿನ ವಾರ ಮತ್ತೊಂದು ತಂಡ ಭೇಟಿ ನೀಡಲಿದೆ ಎಂದು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ ಬುಧವಾರ ತಿಳಿಸಿದೆ.</p>.<p>‘ದೆಹಲಿ, ಚೆನ್ನೈನಲ್ಲಿ ಡಿ.27ರಂದು ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ. 10 ಸಾವಿರ ಕಾರ್ಮಿಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಈ ಸಂಖ್ಯೆ 30 ಸಾವಿರದ ತನಕವೂ ಹೆಚ್ಚಬಹುದು. 10–15 ದಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದು ಹಲವು ತಿಂಗಳವರೆಗೂ ಮುಂದುವರಿಯಬಹುದು’ ಎಂದು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ನ (ಐಬಿಎ) ವಕ್ತಾರರೂ ಆಗಿರುವ ಉಪ ಮಹಾನಿರ್ದೇಶಕ ಶೇ ಪೌಜ್ನರ್ ತಿಳಿಸಿದ್ದಾರೆ.</p>.<p>’ಕಾರ್ಮಿಕರ ಸಮಸ್ಯೆಗಳು ಮತ್ತು ಆಯ್ಕೆ ತಂಡವನ್ನು ನಿಭಾಯಿಸುವ ಐಬಿಎ ವಿಭಾಗದ ಮುಖ್ಯಸ್ಥ ಇಜಾಕ್ ಗುರ್ವಿಟ್ ನೇತೃತ್ವದ ನಿಯೋಗ ಕಳೆದ ವಾರ ಭಾರತದಲ್ಲಿತ್ತು. ಮುಂದಿನ ವಾರ ಐಬಿಎ ತಂಡದ ಇತರ ಸದಸ್ಯರೊಂದಿಗೆ ಸಿಇಒ ಇಗಲ್ ಸ್ಲೋವಿಕ್ ಕಾರ್ಮಿಕರ ನೇಮಕಾತಿಗಾಗಿಯೇ ಭೇಟಿ ನೀಡಲಿದ್ದಾರೆ. ಈ ನಿಯೋಗದೊಂದಿಗೆ ನಿರ್ಮಾಣ ಮತ್ತು ವಸತಿ ಸಚಿವಾಲಯದ ಮಹಾನಿರ್ದೇಶಕ ಯೆಹುದಾ ಮೊರ್ಗೆನ್ಸ್ಟೆರ್ನ್ ಕೂಡ ಇರಲಿದ್ದಾರೆ ಎಂದು ಅವರು ಹೇಳಿದರು.</p>.<p>‘ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಭಾರತದಿಂದ ಕಾರ್ಮಿಕರನ್ನು ಕರೆತರುವ ಕುರಿತಂತೆ ಚರ್ಚಿಸಿದ್ದಾರೆ’ ಎಂದು ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>