ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸಲಹೆ

ಕೈಲಾಸ ಮಾನಸಸರೋವರ ಯಾತ್ರೆ
Last Updated 13 ಏಪ್ರಿಲ್ 2019, 17:22 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಮೂಲಕ ಕೈಲಾಸ ಮಾನಸಸರೋವರ ಯಾತ್ರೆ ಕೈಗೊಳ್ಳುವವರು ಚೀನಾದ ವೀಸಾ ಮತ್ತು ಟಿಬೆಟ್‌ನ ಪ್ರಯಾಣ ಪರವಾನಗಿ ಪಡೆದುಕೊಳ್ಳಬೇಕು ಎಂದು ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ.

ಪ್ರಯಾಣದ ವೇಳೆ ಅನಾರೋಗ್ಯ ಕಾಣಿಸಿಕೊಂಡರೆ ತುರ್ತು ವೈದ್ಯಕೀಯಸೇವೆ ಮೊದಲಾದವುಗಳಿಗಾಗಿ ಯಾತ್ರಾರ್ಥಿಗಳು ವಿಮೆ ಮಾಡಿಸಿಕೊಂಡಿರಬೇಕು ಎಂದಿದೆ.

ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿಯಿಂದ ವೀಸಾ ಪಡೆದುಕೊಳ್ಳಬೇಕು ಎಂದೂ ಸಲಹೆ ನೀಡಿದೆ.

ಟ್ರಾವೆಲ್‌ ಏಜೆಂಟ್‌ಗಳು ನೇಪಾಳದ ಸಿಮಿಕೋಟ್‌ ಅಥವಾ ರಸುವಾಗದಿಗೆ ತೆರಳಲು ನಿರ್ಬಂಧಿತ ಪ್ರದೇಶದ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನು ಖಾತರಿಪಡಿಕೊಳ್ಳಬೇಕು.

ಸಿಮಿಕೋಟ್‌ ಪ್ರದೇಶದಲ್ಲಿ ವೈದ್ಯಕೀಯ ನೆರವು ಲಭಿಸದ ಕಾರಣ ಯಾತ್ರಾರ್ಥಿಗಳು ಸಾಕಷ್ಟು ಔಷಧಗಳನ್ನು ಕೊಂಡೊಯ್ಯಬೇಕು ಎಂದೂ ಹೇಳಲಾಗಿದೆ.

ಯಾತ್ರೆಗೂ ಮುನ್ನ ಯಾತ್ರಾರ್ಥಿಗಳು ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT