<p class="title"><strong>ಕೊಲಂಬೊ: </strong>ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವ ಬೆನ್ನಲ್ಲೇ, ಜನರ ಪರ ಹೋರಾಟಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಮತ್ತು ಪ್ರತಿಭಟನೆಯಿಂದ ಹಿಂದೆ ಸರಿಯಬೇಕು ಎಂದು ಗೊಟಬಯ ಅವರು ಮನವಿ ಮಾಡಿದ್ದಾರೆ.</p>.<p class="title">ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಜನರ ಪರವಾಗಿ, ರಾಜಕೀಯ ಒಮ್ಮತಕ್ಕಾಗಿ ಎಲ್ಲಾ ರಾಜಕೀಯ ನಾಯಕರನ್ನು ಆಮಂತ್ರಿಸುತ್ತಿದ್ದೇನೆ. ಅಲ್ಲದೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜನರು ಜನಪರ ಹೋರಾಟಗಳಲ್ಲಿ ಭಾಗಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.</p>.<p class="title"><a href="https://www.prajavani.net/world-news/lawmaker-sri-lanka-president-agrees-to-remove-brother-as-pm-932531.html" itemprop="url">ಶ್ರೀಲಂಕಾ ಪ್ರಧಾನಿ ಪದಚ್ಯುತಿಗೆ ಅಧ್ಯಕ್ಷ ಗೋಟಬಯ ಸಮ್ಮತಿ: ಮೈತ್ರಿಪಾಲ ಸಿರಿಸೇನಾ </a></p>.<p>ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಸರಿಪಡಿಸಲು ಮಧ್ಯಂತರ ಸರ್ಕಾರ ರಚನೆ ಆಗಬೇಕು. ಇದಕ್ಕಾಗಿ ಅಧ್ಯಕ್ಷ ಗೊಟಬಯ ಅವರ ಅಣ್ಣನಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ, ಎಲ್ಲಾ ರಾಜಕಾರಣಿಗಳನ್ನು ತಿರಸ್ಕರಿಸಲು ಜನರ ಮೇಲೆ ಪ್ರಭಾವ ಬೀರಬೇಕಾಗುತ್ತದೆ ಎಂದು ಬೌದ್ಧ ಸನ್ಯಾಸಿಯೊಬ್ಬರು ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಮಾರನೇ ದಿನವೇ ಗೊಟಬಾಯ ಅವರ ಈ ಹೇಳಿಕೆ ಹೊರಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಕೊಲಂಬೊ: </strong>ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವ ಬೆನ್ನಲ್ಲೇ, ಜನರ ಪರ ಹೋರಾಟಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಮತ್ತು ಪ್ರತಿಭಟನೆಯಿಂದ ಹಿಂದೆ ಸರಿಯಬೇಕು ಎಂದು ಗೊಟಬಯ ಅವರು ಮನವಿ ಮಾಡಿದ್ದಾರೆ.</p>.<p class="title">ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ‘ಜನರ ಪರವಾಗಿ, ರಾಜಕೀಯ ಒಮ್ಮತಕ್ಕಾಗಿ ಎಲ್ಲಾ ರಾಜಕೀಯ ನಾಯಕರನ್ನು ಆಮಂತ್ರಿಸುತ್ತಿದ್ದೇನೆ. ಅಲ್ಲದೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಜನರು ಜನಪರ ಹೋರಾಟಗಳಲ್ಲಿ ಭಾಗಯಾಗಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.</p>.<p class="title"><a href="https://www.prajavani.net/world-news/lawmaker-sri-lanka-president-agrees-to-remove-brother-as-pm-932531.html" itemprop="url">ಶ್ರೀಲಂಕಾ ಪ್ರಧಾನಿ ಪದಚ್ಯುತಿಗೆ ಅಧ್ಯಕ್ಷ ಗೋಟಬಯ ಸಮ್ಮತಿ: ಮೈತ್ರಿಪಾಲ ಸಿರಿಸೇನಾ </a></p>.<p>ದೇಶದಲ್ಲಿ ಉದ್ಭವಿಸಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಸರಿಪಡಿಸಲು ಮಧ್ಯಂತರ ಸರ್ಕಾರ ರಚನೆ ಆಗಬೇಕು. ಇದಕ್ಕಾಗಿ ಅಧ್ಯಕ್ಷ ಗೊಟಬಯ ಅವರ ಅಣ್ಣನಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ, ಎಲ್ಲಾ ರಾಜಕಾರಣಿಗಳನ್ನು ತಿರಸ್ಕರಿಸಲು ಜನರ ಮೇಲೆ ಪ್ರಭಾವ ಬೀರಬೇಕಾಗುತ್ತದೆ ಎಂದು ಬೌದ್ಧ ಸನ್ಯಾಸಿಯೊಬ್ಬರು ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಮಾರನೇ ದಿನವೇ ಗೊಟಬಾಯ ಅವರ ಈ ಹೇಳಿಕೆ ಹೊರಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>