ಮರುಭೂಮಿ ಪ್ರದೇಶಗಳಲ್ಲಿನ ತಾಪಮಾನದಲ್ಲಿ ಏರಿಕೆ, ಮಳೆಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ, ಉಷ್ಣವಲಯದ ಚಂಡಮಾರುತದ ಫಲವಾಗಿ ಬೀಸುವ ಬಲವಾದ ಗಾಳಿ ಮುಂತಾದ ವೈಪರೀತ್ಯಗಳು ಮಿಡತೆಗಳ ಸಂತಾನೋತ್ಪತ್ತಿ ಹಾಗೂ ವಲಸೆಗೆ ಹೊಸ ಪರಿಸರವನ್ನು ಸೃಷ್ಟಿಸಿದೆ. ಬೆಳೆಯನ್ನು ತಿನ್ನುವ ಸಣ್ಣ ಕೊಂಬಿನ ಈ ಮಿಡತೆಗಳು ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಾಳಿ ಮಾಡಿವೆ ಎಂದು ಸಂಸ್ಥೆ ಹೇಳಿದೆ.