ಲಂಡನ್: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕದ ಅಂಗವಾಗಿ ಸ್ಕಾಟ್ಲೆಂಡ್ ರಾಜಧಾನಿ ಎಡಿನ್ಬರ್ಗ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ರಾಜ ಚಾರ್ಲ್ಸ್ ಹಾಗೂ ರಾಣಿ ಕ್ಯಾಮಿಲ್ಲಾ ಅವರಿಗೆ ರತ್ನಖಚಿತ ಕಿರೀಟವನ್ನು ಸಮರ್ಪಿಸಲಾಯಿತು.
‘ಯುನೈಟೆಡ್ ಕಿಂಗ್ಡಮ್ ಮತ್ತು ಕಾಮನ್ವೆಲ್ತ್ ಜನರ ಏಳಿಗೆಗೆ ಶ್ರಮಿಸಲು, ಅವರ ಸೇವೆ ಮಾಡಲು ಲಕ್ಷ್ಮಿ ದೇವಿ ಹಾಗೂ ವೆಂಕಟೇಶ್ವರ ದೇವರು ರಾಜಮನೆತನವನ್ನು ಅನುಗ್ರಹಿಸಲಿ’ ಎಂದು ಡಾ.ಶ್ರೀಹರಿ ವಲ್ಲಭಜೋಸುಲ ಪ್ರಾರ್ಥಿಸಿದರು. ಅವರು ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿರುವ ದೇವಸ್ಥಾನದ ಮುಖ್ಯ ಅರ್ಚಕರು.
ಕ್ರೈಸ್ತ, ಮುಸ್ಲಿಂ ಧರ್ಮ ಗುರುಗಳ ಜೊತೆಗೆ ಯೆಹೂದಿ ಹಾಗೂ ಬೌದ್ಧ ಧರ್ಮಗಳ ಗುರುಗಳು ಪಾಲ್ಗೊಂಡಿದ್ದರು.