ವಾಷಿಂಗ್ಟನ್ (ಪಿಟಿಐ):ಬಂಗ್ಲಾದೇಶದಿಂದ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ ನೀಡುವಂತೆ ಆಗ್ರಹಿಸಿ ಇಲ್ಲಿನ ಸಂಘಟನೆಯೊಂದು ಅಭಿಯಾನ ಆರಂಭಿಸಿದೆ. ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್ಆರ್ಸಿ) ಹೊರಗುಳಿದಿದ್ದು, ಅವರಿಗೆ ಪೌರತ್ವ ನೀಡುವಂತೆ ಸಂಘಟನೆಯು ಭಾರತಕ್ಕೆ ಆಗ್ರಹಿಸಿದೆ.