<p><strong>ಲಂಡನ್:</strong> ‘ಭಯೋತ್ಪಾದಕ ಸಂಘಟನೆಗಳಿಗೆ ನೆರವು, ತರಬೇತಿ ಮತ್ತು ಆರ್ಥಿಕ ಸಹಕಾರ ನೀಡುತ್ತಾ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಳಕು ಕೆಲಸಗಳನ್ನು ಪಾಕಿಸ್ತಾನ ಮಾಡುತ್ತಲೇ ಬಂದ ತಪ್ಪಿಗೆ ಈಗ ತೀವ್ರವಾಗಿ ಪರಿತಪಿಸುವಂತಾಗಿದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಭಿಪ್ರಾಯಪಟ್ಟಿದ್ದಾರೆ.</p><p>ಸ್ಕೈ ನ್ಯೂಸ್ ಯಾಲ್ಡಾ ಹಕೀಂ ಅವರು ಕಳಿದ, ‘ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ಸುದೀರ್ಘ ಇತಿಹಾಸ ಇದೆಯೇ’ ಎಂಬ ಪ್ರಶ್ನೆಗೆ ಆಸಿಫ್ ಪ್ರತಿಕ್ರಿಯಿಸಿದ್ದಾರೆ.</p>.Pahalgam Terror attack: ಪಾಕ್ ವಿರುದ್ಧ ಭಾರತ ಕೈಗೊಂಡ ಪ್ರಮುಖ 5 ನಿರ್ಣಯಗಳು....ಆಳ–ಅಗಲ | ಪಾಕ್ಗೆ ಹೊಡೆತ ನೀಡುವುದೇ ಸಿಂಧೂ ಜಲ ಒಪ್ಪಂದ ಅಮಾನತು ?.<p>‘ಇಂಥ ಕೊಳಕು ಕೆಲಸವನ್ನು ಅಮೆರಿಕಕ್ಕಾಗಿ ಮೂರು ದಶಕಗಳಿಂದ ಮಾಡುತ್ತಲೇ ಬಂದಿದ್ದೇವೆ. ಪಶ್ಚಿಮದಲ್ಲಿ ಬ್ರಿಟನ್ ಕೂಡಾ ಸೇರುತ್ತದೆ. ಇದು ಅತಿ ದೊಡ್ಡ ತಪ್ಪು. ಅದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ. ಸೋವಿತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು 9/11 ನಂತರದ ಯುದ್ಧದಲ್ಲಿ ನಾವು ಭಾಗಿಯಾಗದಿದ್ದರೆ ದೋಷಾರೋಪಣೆ ಇಲ್ಲದಂಥ ದಾಖಲೆಯನ್ನು ಪಾಕಿಸ್ತಾನ ಹೊಂದಿರುತ್ತಿತ್ತು’ ಎಂದಿದ್ದಾರೆ.</p><p>‘ಈ ಭಾಗದಲ್ಲಿ ಇಂಥ ಯಾವುದೇ ದುರ್ಘಟನೆ ನಡೆದಾಗ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡುವುದು ದೊಡ್ಡವರಿಗೆ ಬಹು ಸುಲಭ. 80ರ ದಶಕದಲ್ಲಿ ನಾವು ಅಮೆರಿಕ ಪರವಾಗಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡುತ್ತಿದ್ದರೆ, ಇಂದಿನ ಈ ಎಲ್ಲಾ ಭಯೋತ್ಪಾದಕರು ವಾಷಿಂಗ್ಟನ್ನಲ್ಲಿ ಕೂತು ಸಂಭ್ರಮಿಸುತ್ತಾ ಊಟ ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.</p><p>‘ನಂತರ 9/11 ದಾಳಿ ನಡೆಯಿತು. ಆಗಲೂ ಪರಿಸ್ಥಿತಿ ಅದೇ ಆಗಿತ್ತು. ನಮ್ಮ ಸರ್ಕಾರವೂ ತಪ್ಪು ಮಾಡಿದೆ ಎಂದು ನನಗನಿಸುತ್ತಿದೆ. ಪಾಶ್ಚಿಮಾತ್ಯರು ಸದಾ ನಮ್ಮನ್ನು ‘ಬದಲಿ’ಯಾಗಿ ಬಳಸಿಕೊಂಡೇ ಬರುತ್ತಿದ್ದಾರೆ’ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.</p>.Pahalgam Terror Attack: ಪಾಕ್ ಆರ್ಥಿಕತೆಗೆ ಭಾರಿ ಪೆಟ್ಟು?.Pahalgam Terror Attack | ಗುಪ್ತಚರ ವೈಫಲ್ಯ: ವಿಪಕ್ಷಗಳ ಆಕ್ಷೇಪ .<p>ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಈ ಕೃತ್ಯವನ್ನು ತಾನೇ ನಡೆಸಿರುವುದಾಗಿ ದಿ ರೆಸಿಸ್ಟನ್ಸ್ ಫ್ರಂಟ್ ಹೇಳಿಕೊಂಡಿದೆ. ಈ ಸಂಘಟನೆಯು ನಿಷೇಧಿತ ಲಷ್ಕರ್ ಎ ತಯಬಾದ ಅಂಗಸಂಸ್ಥೆಯಾಗಿದೆ ಎಂದೆನ್ನಲಾಗಿದೆ. </p><p>‘ಇಂಥ ಘಟನೆ ನಡೆದಾಗ ಎಲ್ಲಾ ಕೈಗಳೂ ಪಾಕಿಸ್ತಾನದತ್ತ ಬೊಟ್ಟು ಮಾಡುತ್ತಿವೆ. ಲಷ್ಕರ್ ಎ ತಯಬಾ ಪಾಕಿಸ್ತಾನದಲ್ಲಿ ಈಗಿಲ್ಲ. ಅದು ನಶಿಸಿದೆ. ಮೂಲ ಸಂಘಟನೆಯೇ ಇಲ್ಲದಿರುವಾಗ, ಅದರ ಅಂಗ ಸಂಸ್ಥೆ ಹುಟ್ಟಲು ಹೇಗೆ ಸಾಧ್ಯ’ ಎಂದು ಆಸಿಫ್ ಪ್ರಶ್ನಿಸಿದ್ದಾರೆ.</p><p>‘ಈ ಘಟನೆ ನಂತರ ಭಾರತದ ನಿರ್ಬಂಧಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ. ಒಂದೊಮ್ಮೆ ಅವರು ದಾಳಿ ನಡೆಸಲು ಮುಂದಾದರೆ, ಅದು ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ವರ್ಚುವಲ್ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಅವರು ಹೇಳಿದರು.</p>.Pahalgam Attak: ಸಿಎಂ ಒಮರ್ ಅಬ್ದುಲ್ಲಾ ಭೇಟಿ ಮಾಡಿದ ರಾಹುಲ್ ಗಾಂಧಿ.Pahalgam Terror Attack: ಪೊಲೀಸ್ ಗೌರವದೊಂದಿಗೆ ಭರತ್ ಭೂಷಣ್ ಅಂತ್ಯಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ‘ಭಯೋತ್ಪಾದಕ ಸಂಘಟನೆಗಳಿಗೆ ನೆರವು, ತರಬೇತಿ ಮತ್ತು ಆರ್ಥಿಕ ಸಹಕಾರ ನೀಡುತ್ತಾ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಳಕು ಕೆಲಸಗಳನ್ನು ಪಾಕಿಸ್ತಾನ ಮಾಡುತ್ತಲೇ ಬಂದ ತಪ್ಪಿಗೆ ಈಗ ತೀವ್ರವಾಗಿ ಪರಿತಪಿಸುವಂತಾಗಿದೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಭಿಪ್ರಾಯಪಟ್ಟಿದ್ದಾರೆ.</p><p>ಸ್ಕೈ ನ್ಯೂಸ್ ಯಾಲ್ಡಾ ಹಕೀಂ ಅವರು ಕಳಿದ, ‘ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವುದಕ್ಕೆ ಸುದೀರ್ಘ ಇತಿಹಾಸ ಇದೆಯೇ’ ಎಂಬ ಪ್ರಶ್ನೆಗೆ ಆಸಿಫ್ ಪ್ರತಿಕ್ರಿಯಿಸಿದ್ದಾರೆ.</p>.Pahalgam Terror attack: ಪಾಕ್ ವಿರುದ್ಧ ಭಾರತ ಕೈಗೊಂಡ ಪ್ರಮುಖ 5 ನಿರ್ಣಯಗಳು....ಆಳ–ಅಗಲ | ಪಾಕ್ಗೆ ಹೊಡೆತ ನೀಡುವುದೇ ಸಿಂಧೂ ಜಲ ಒಪ್ಪಂದ ಅಮಾನತು ?.<p>‘ಇಂಥ ಕೊಳಕು ಕೆಲಸವನ್ನು ಅಮೆರಿಕಕ್ಕಾಗಿ ಮೂರು ದಶಕಗಳಿಂದ ಮಾಡುತ್ತಲೇ ಬಂದಿದ್ದೇವೆ. ಪಶ್ಚಿಮದಲ್ಲಿ ಬ್ರಿಟನ್ ಕೂಡಾ ಸೇರುತ್ತದೆ. ಇದು ಅತಿ ದೊಡ್ಡ ತಪ್ಪು. ಅದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ. ಸೋವಿತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಮತ್ತು 9/11 ನಂತರದ ಯುದ್ಧದಲ್ಲಿ ನಾವು ಭಾಗಿಯಾಗದಿದ್ದರೆ ದೋಷಾರೋಪಣೆ ಇಲ್ಲದಂಥ ದಾಖಲೆಯನ್ನು ಪಾಕಿಸ್ತಾನ ಹೊಂದಿರುತ್ತಿತ್ತು’ ಎಂದಿದ್ದಾರೆ.</p><p>‘ಈ ಭಾಗದಲ್ಲಿ ಇಂಥ ಯಾವುದೇ ದುರ್ಘಟನೆ ನಡೆದಾಗ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡುವುದು ದೊಡ್ಡವರಿಗೆ ಬಹು ಸುಲಭ. 80ರ ದಶಕದಲ್ಲಿ ನಾವು ಅಮೆರಿಕ ಪರವಾಗಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡುತ್ತಿದ್ದರೆ, ಇಂದಿನ ಈ ಎಲ್ಲಾ ಭಯೋತ್ಪಾದಕರು ವಾಷಿಂಗ್ಟನ್ನಲ್ಲಿ ಕೂತು ಸಂಭ್ರಮಿಸುತ್ತಾ ಊಟ ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.</p><p>‘ನಂತರ 9/11 ದಾಳಿ ನಡೆಯಿತು. ಆಗಲೂ ಪರಿಸ್ಥಿತಿ ಅದೇ ಆಗಿತ್ತು. ನಮ್ಮ ಸರ್ಕಾರವೂ ತಪ್ಪು ಮಾಡಿದೆ ಎಂದು ನನಗನಿಸುತ್ತಿದೆ. ಪಾಶ್ಚಿಮಾತ್ಯರು ಸದಾ ನಮ್ಮನ್ನು ‘ಬದಲಿ’ಯಾಗಿ ಬಳಸಿಕೊಂಡೇ ಬರುತ್ತಿದ್ದಾರೆ’ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.</p>.Pahalgam Terror Attack: ಪಾಕ್ ಆರ್ಥಿಕತೆಗೆ ಭಾರಿ ಪೆಟ್ಟು?.Pahalgam Terror Attack | ಗುಪ್ತಚರ ವೈಫಲ್ಯ: ವಿಪಕ್ಷಗಳ ಆಕ್ಷೇಪ .<p>ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಈ ಕೃತ್ಯವನ್ನು ತಾನೇ ನಡೆಸಿರುವುದಾಗಿ ದಿ ರೆಸಿಸ್ಟನ್ಸ್ ಫ್ರಂಟ್ ಹೇಳಿಕೊಂಡಿದೆ. ಈ ಸಂಘಟನೆಯು ನಿಷೇಧಿತ ಲಷ್ಕರ್ ಎ ತಯಬಾದ ಅಂಗಸಂಸ್ಥೆಯಾಗಿದೆ ಎಂದೆನ್ನಲಾಗಿದೆ. </p><p>‘ಇಂಥ ಘಟನೆ ನಡೆದಾಗ ಎಲ್ಲಾ ಕೈಗಳೂ ಪಾಕಿಸ್ತಾನದತ್ತ ಬೊಟ್ಟು ಮಾಡುತ್ತಿವೆ. ಲಷ್ಕರ್ ಎ ತಯಬಾ ಪಾಕಿಸ್ತಾನದಲ್ಲಿ ಈಗಿಲ್ಲ. ಅದು ನಶಿಸಿದೆ. ಮೂಲ ಸಂಘಟನೆಯೇ ಇಲ್ಲದಿರುವಾಗ, ಅದರ ಅಂಗ ಸಂಸ್ಥೆ ಹುಟ್ಟಲು ಹೇಗೆ ಸಾಧ್ಯ’ ಎಂದು ಆಸಿಫ್ ಪ್ರಶ್ನಿಸಿದ್ದಾರೆ.</p><p>‘ಈ ಘಟನೆ ನಂತರ ಭಾರತದ ನಿರ್ಬಂಧಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ. ಒಂದೊಮ್ಮೆ ಅವರು ದಾಳಿ ನಡೆಸಲು ಮುಂದಾದರೆ, ಅದು ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ವರ್ಚುವಲ್ ವೇದಿಕೆಯಲ್ಲಿ ನಡೆದ ಸಂವಾದದಲ್ಲಿ ಅವರು ಹೇಳಿದರು.</p>.Pahalgam Attak: ಸಿಎಂ ಒಮರ್ ಅಬ್ದುಲ್ಲಾ ಭೇಟಿ ಮಾಡಿದ ರಾಹುಲ್ ಗಾಂಧಿ.Pahalgam Terror Attack: ಪೊಲೀಸ್ ಗೌರವದೊಂದಿಗೆ ಭರತ್ ಭೂಷಣ್ ಅಂತ್ಯಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>