<p><strong>ಕ್ವಾಲಾಲಂಪುರ</strong>: ‘ಭಾರತವು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ’ ಎಂಬುದಾಗಿ ಜಗತ್ತು ನೋಡುತ್ತಿದೆ. ಐರೋಪ್ಯ ಒಕ್ಕೂಟವಲ್ಲದೇ ಹಲವು ದೇಶಗಳೊಂದಿಗೆ ಇತ್ತೀಚೆಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳೇ ಇದಕ್ಕೆ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.</p><p>ಎರಡು ದಿನಗಳ ಮಲೇಷ್ಯಾ ಪ್ರವಾಸ ಕೈಗೊಂಡಿರುವ ಅವರು, ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. </p><p>ಬ್ರಿಟನ್, ಅಮೆರಿಕ, ಯುನೈಟೆಡ್ ಅರಬ್ ಎಮಿ ರೇಟ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಒಮಾನ್ ಹಾಗೂ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದ ಮೋದಿ,‘ನಂಬಿಕೆಯು ಭಾರತದ ಬಲಿಷ್ಠ ಕರೆನ್ಸಿಯಾಗಿದೆ’ ಎಂದರು.</p>.<p><strong>ಸ್ವಾಗತ: </strong>ಇದಕ್ಕೂ ಮುನ್ನ, ಇಲ್ಲಿನ ವಿಮಾನ ನಿಲ್ದಾಣ ದಲ್ಲಿ ಮೋದಿ ಅವರನ್ನು ಪ್ರಧಾನಿ ಅನ್ವರ್ ಇಬ್ರಾಹಿಂ ಸ್ವಾಗತಿಸಿದರು. ಬಳಿಕ, ಇಬ್ಬರೂ ಒಂದೇ ಕಾರಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು.</p><p>ಅಲ್ಲಿ ಇಬ್ಬರಿಗೂ ಅಭೂತಪೂರ್ವ ಸ್ವಾಗತ ದೊರೆಯಿತು. ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಎಂಬ ಘೋಷಣೆಗಳ ನಡುವೆ ವೇದಿಕೆಗೆ ಬಂದರು.</p><p>800ಕ್ಕೂ ಹೆಚ್ಚು ಕಲಾವಿದರು ಭರತನಾಟ್ಯ, ಕಥಕ್, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಲಾವಣಿ ಮತ್ತು ಒಡಿಸಿ ಸೇರಿದಂತೆ ಭಾರತೀಯ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳನ್ನು ಪ್ರದರ್ಶಿಸಿದರು.</p><p>ಇದೇ ವೇಳೆ, ಭಾರತೀಯ ನೃತ್ಯ ಪ್ರದರ್ಶನವೊಂದರಲ್ಲಿ ಅತಿ ಹೆಚ್ಚು ಕಲಾವಿದರು ಭಾಗವಹಿಸಿದ್ದಕ್ಕಾಗಿ, ಆ ಪ್ರದರ್ಶನವು ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ ಎಂದು ಘೋಷಿಸಲಾಯಿತು.</p>.<p><strong><ins>ಪ್ರಮುಖ ಘೋಷಣೆಗಳು</ins></strong></p><ul><li><p>ಮಲೇಷ್ಯಾದಲ್ಲಿ ಹೊಸ ಕಾನ್ಸುಲೇಟ್ ಕಚೇರಿ ಸ್ಥಾಪನೆ</p></li><li><p>ಬಾಂಧವ್ಯ ವೃದ್ಧಿಗೆ ತಿರುವಳ್ಳುವರ್ ಕೇಂದ್ರ ಸ್ಥಾಪನೆ</p></li><li><p>ಭಾರತದಲ್ಲಿ ವ್ಯಾಸಂಗ ಕೈಗೊಳ್ಳುವ ಮಲೇಷ್ಯಾ ವಿದ್ಯಾರ್ಥಿಗಳಿಗಾಗಿ ‘ತಿರುವಳ್ಳುವರ್ ವಿದ್ಯಾರ್ಥಿವೇತನ’ ಆರಂಭ</p></li><li><p>ಭಾರತದ ಯುಪಿಐ ಮೂಲಕ ಹಣ ಪಾವತಿ ಸೌಲಭ್ಯ ಮಲೇಷ್ಯಾದಲ್ಲಿ ಶೀಘ್ರದಲ್ಲೇ ಜಾರಿ –ಪಿಟಿಐ ಚಿತ್ರ</p></li></ul>.<div><blockquote>ರಾಜತಾಂತ್ರಿಕ ಸಂಬಂಧ ವ್ಯಾಪಾರ ಒಪ್ಪಂದಗಳಿಗೂ ಮೊದಲೇ ಭಾರತ ಮತ್ತು ಮಲೇಷ್ಯಾ ನಡುವೆ ಪ್ರಾಚೀನ ಕಾಲದಿಂದಲೂ ಉತ್ತಮ ಬಾಂಧವ್ಯ ಇದೆ</blockquote><span class="attribution">– ಅನ್ವರ್ ಇಬ್ರಾಹಿಂ, ಮಲೇಷ್ಯಾ ಪ್ರಧಾನಿ</span></div>.<div><blockquote>ದೊಡ್ಡ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರು ಮಲೇಷ್ಯಾ–ಭಾರತ ನಡುವಿನ ಬಾಂಧವ್ಯಕ್ಕೆ ಸೇತುವೆಯಾಗಿದ್ದಾರೆ. ಭಾಷೆ ಪರಂಪರೆ ಸೇರಿ ಹಲವು ವಿಚಾರಗಳು ಉಭಯ ದೇಶಗಳನ್ನು ಬೆಸೆದಿವೆ</blockquote><span class="attribution">– ನರೇಂದ್ರ ಮೋದಿ, ಪ್ರಧಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ವಾಲಾಲಂಪುರ</strong>: ‘ಭಾರತವು ಪ್ರಗತಿಯ ವಿಶ್ವಾಸಾರ್ಹ ಪಾಲುದಾರ’ ಎಂಬುದಾಗಿ ಜಗತ್ತು ನೋಡುತ್ತಿದೆ. ಐರೋಪ್ಯ ಒಕ್ಕೂಟವಲ್ಲದೇ ಹಲವು ದೇಶಗಳೊಂದಿಗೆ ಇತ್ತೀಚೆಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳೇ ಇದಕ್ಕೆ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.</p><p>ಎರಡು ದಿನಗಳ ಮಲೇಷ್ಯಾ ಪ್ರವಾಸ ಕೈಗೊಂಡಿರುವ ಅವರು, ಇಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. </p><p>ಬ್ರಿಟನ್, ಅಮೆರಿಕ, ಯುನೈಟೆಡ್ ಅರಬ್ ಎಮಿ ರೇಟ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಒಮಾನ್ ಹಾಗೂ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳನ್ನು ಉಲ್ಲೇಖಿಸಿದ ಮೋದಿ,‘ನಂಬಿಕೆಯು ಭಾರತದ ಬಲಿಷ್ಠ ಕರೆನ್ಸಿಯಾಗಿದೆ’ ಎಂದರು.</p>.<p><strong>ಸ್ವಾಗತ: </strong>ಇದಕ್ಕೂ ಮುನ್ನ, ಇಲ್ಲಿನ ವಿಮಾನ ನಿಲ್ದಾಣ ದಲ್ಲಿ ಮೋದಿ ಅವರನ್ನು ಪ್ರಧಾನಿ ಅನ್ವರ್ ಇಬ್ರಾಹಿಂ ಸ್ವಾಗತಿಸಿದರು. ಬಳಿಕ, ಇಬ್ಬರೂ ಒಂದೇ ಕಾರಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು.</p><p>ಅಲ್ಲಿ ಇಬ್ಬರಿಗೂ ಅಭೂತಪೂರ್ವ ಸ್ವಾಗತ ದೊರೆಯಿತು. ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಎಂಬ ಘೋಷಣೆಗಳ ನಡುವೆ ವೇದಿಕೆಗೆ ಬಂದರು.</p><p>800ಕ್ಕೂ ಹೆಚ್ಚು ಕಲಾವಿದರು ಭರತನಾಟ್ಯ, ಕಥಕ್, ಕಥಕ್ಕಳಿ, ಕೂಚಿಪುಡಿ, ಯಕ್ಷಗಾನ, ಲಾವಣಿ ಮತ್ತು ಒಡಿಸಿ ಸೇರಿದಂತೆ ಭಾರತೀಯ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳನ್ನು ಪ್ರದರ್ಶಿಸಿದರು.</p><p>ಇದೇ ವೇಳೆ, ಭಾರತೀಯ ನೃತ್ಯ ಪ್ರದರ್ಶನವೊಂದರಲ್ಲಿ ಅತಿ ಹೆಚ್ಚು ಕಲಾವಿದರು ಭಾಗವಹಿಸಿದ್ದಕ್ಕಾಗಿ, ಆ ಪ್ರದರ್ಶನವು ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ ಎಂದು ಘೋಷಿಸಲಾಯಿತು.</p>.<p><strong><ins>ಪ್ರಮುಖ ಘೋಷಣೆಗಳು</ins></strong></p><ul><li><p>ಮಲೇಷ್ಯಾದಲ್ಲಿ ಹೊಸ ಕಾನ್ಸುಲೇಟ್ ಕಚೇರಿ ಸ್ಥಾಪನೆ</p></li><li><p>ಬಾಂಧವ್ಯ ವೃದ್ಧಿಗೆ ತಿರುವಳ್ಳುವರ್ ಕೇಂದ್ರ ಸ್ಥಾಪನೆ</p></li><li><p>ಭಾರತದಲ್ಲಿ ವ್ಯಾಸಂಗ ಕೈಗೊಳ್ಳುವ ಮಲೇಷ್ಯಾ ವಿದ್ಯಾರ್ಥಿಗಳಿಗಾಗಿ ‘ತಿರುವಳ್ಳುವರ್ ವಿದ್ಯಾರ್ಥಿವೇತನ’ ಆರಂಭ</p></li><li><p>ಭಾರತದ ಯುಪಿಐ ಮೂಲಕ ಹಣ ಪಾವತಿ ಸೌಲಭ್ಯ ಮಲೇಷ್ಯಾದಲ್ಲಿ ಶೀಘ್ರದಲ್ಲೇ ಜಾರಿ –ಪಿಟಿಐ ಚಿತ್ರ</p></li></ul>.<div><blockquote>ರಾಜತಾಂತ್ರಿಕ ಸಂಬಂಧ ವ್ಯಾಪಾರ ಒಪ್ಪಂದಗಳಿಗೂ ಮೊದಲೇ ಭಾರತ ಮತ್ತು ಮಲೇಷ್ಯಾ ನಡುವೆ ಪ್ರಾಚೀನ ಕಾಲದಿಂದಲೂ ಉತ್ತಮ ಬಾಂಧವ್ಯ ಇದೆ</blockquote><span class="attribution">– ಅನ್ವರ್ ಇಬ್ರಾಹಿಂ, ಮಲೇಷ್ಯಾ ಪ್ರಧಾನಿ</span></div>.<div><blockquote>ದೊಡ್ಡ ಸಂಖ್ಯೆಯಲ್ಲಿ ನೆಲಸಿರುವ ಭಾರತೀಯರು ಮಲೇಷ್ಯಾ–ಭಾರತ ನಡುವಿನ ಬಾಂಧವ್ಯಕ್ಕೆ ಸೇತುವೆಯಾಗಿದ್ದಾರೆ. ಭಾಷೆ ಪರಂಪರೆ ಸೇರಿ ಹಲವು ವಿಚಾರಗಳು ಉಭಯ ದೇಶಗಳನ್ನು ಬೆಸೆದಿವೆ</blockquote><span class="attribution">– ನರೇಂದ್ರ ಮೋದಿ, ಪ್ರಧಾನಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>