<p class="title"><strong>ಯಾಂಗೂನ್: </strong>ರಾಯಿಟರ್ಸ್ನ ಇಬ್ಬರು ಪತ್ರಕರ್ತರಿಗೆ ರಾಜ್ಯ ರಹಸ್ಯ ಕಾಯ್ದೆ ಉಲ್ಲಂಘನೆ ಅಡಿ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸುವ ಸಂದರ್ಭದಲ್ಲಿ ವರದಿ ಮಾಡುವಾಗ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಈ ಪತ್ರಕರ್ತರು ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.</p>.<p class="title">ವಾ ಲೋನ್ (32) ಮತ್ತು ಕ್ವಾವ್ ಸೊ ಊ (28) ಶಿಕ್ಷೆಗೊಳಗಾದ ಪತ್ರಕರ್ತರು. ಕಳೆದ ಡಿಸೆಂಬರ್ನಿಂದ ಇಬ್ಬರು ಕಾರಾಗೃಹವಾಸದಲ್ಲಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.</p>.<p class="title">ರೋಹಿಂಗ್ಯಾ ಮುಸ್ಲಿಮರನ್ನುಬಾಂಗ್ಲಾದೇಶಕ್ಕೆ ಓಡಿಸುವ ಸಂದರ್ಭದಲ್ಲಿ ಮ್ಯಾನ್ಮಾರ್ನ ಭದ್ರತಾ ಪಡೆಗಳ ಯೋಧರು ಅತ್ಯಾಚಾರ, ಹತ್ಯೆ ನಡೆಸಿದ್ದಾರೆ ಎಂದು ಪತ್ರಕರ್ತರು ವರದಿ ಮಾಡಿದ್ದರು.</p>.<p class="title">‘ಸರ್ಕಾರ ನಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು. ಆದರೆ, ಜನರ ಕಿವಿಗಳು ಹಾಗೂ ಕಣ್ಣನ್ನು ಮುಚ್ಚಲು ಸಾಧ್ಯವಿಲ್ಲ’ ಎಂದು ಕ್ವಾ ಸೊ ಊ ಹೇಳಿದ್ದರೆ, ‘ನಾವು ಈ ತೀರ್ಪನ್ನು ಧೈರ್ಯದಿಂದ ಎದುರಿಸುತ್ತೇವೆ’ ಎಂದು ವಾ ಲೋನ್ ಹೇಳಿದ್ದಾರೆ.</p>.<p class="title">‘ಸುಳ್ಳು ಆರೋಪದ ಮೇಲೆ ಪತ್ರಕರ್ತರನ್ನು ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ಪತ್ರಕರ್ತರ ಪರ ವಕೀಲರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಯಾಂಗೂನ್: </strong>ರಾಯಿಟರ್ಸ್ನ ಇಬ್ಬರು ಪತ್ರಕರ್ತರಿಗೆ ರಾಜ್ಯ ರಹಸ್ಯ ಕಾಯ್ದೆ ಉಲ್ಲಂಘನೆ ಅಡಿ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸುವ ಸಂದರ್ಭದಲ್ಲಿ ವರದಿ ಮಾಡುವಾಗ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಈ ಪತ್ರಕರ್ತರು ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.</p>.<p class="title">ವಾ ಲೋನ್ (32) ಮತ್ತು ಕ್ವಾವ್ ಸೊ ಊ (28) ಶಿಕ್ಷೆಗೊಳಗಾದ ಪತ್ರಕರ್ತರು. ಕಳೆದ ಡಿಸೆಂಬರ್ನಿಂದ ಇಬ್ಬರು ಕಾರಾಗೃಹವಾಸದಲ್ಲಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.</p>.<p class="title">ರೋಹಿಂಗ್ಯಾ ಮುಸ್ಲಿಮರನ್ನುಬಾಂಗ್ಲಾದೇಶಕ್ಕೆ ಓಡಿಸುವ ಸಂದರ್ಭದಲ್ಲಿ ಮ್ಯಾನ್ಮಾರ್ನ ಭದ್ರತಾ ಪಡೆಗಳ ಯೋಧರು ಅತ್ಯಾಚಾರ, ಹತ್ಯೆ ನಡೆಸಿದ್ದಾರೆ ಎಂದು ಪತ್ರಕರ್ತರು ವರದಿ ಮಾಡಿದ್ದರು.</p>.<p class="title">‘ಸರ್ಕಾರ ನಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು. ಆದರೆ, ಜನರ ಕಿವಿಗಳು ಹಾಗೂ ಕಣ್ಣನ್ನು ಮುಚ್ಚಲು ಸಾಧ್ಯವಿಲ್ಲ’ ಎಂದು ಕ್ವಾ ಸೊ ಊ ಹೇಳಿದ್ದರೆ, ‘ನಾವು ಈ ತೀರ್ಪನ್ನು ಧೈರ್ಯದಿಂದ ಎದುರಿಸುತ್ತೇವೆ’ ಎಂದು ವಾ ಲೋನ್ ಹೇಳಿದ್ದಾರೆ.</p>.<p class="title">‘ಸುಳ್ಳು ಆರೋಪದ ಮೇಲೆ ಪತ್ರಕರ್ತರನ್ನು ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ಪತ್ರಕರ್ತರ ಪರ ವಕೀಲರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>