ಬ್ರಿಟನ್ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಅವರು ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗಿನ ಸಂವಾದದ ವೇಳೆ ಈ ಮಾಹಿತಿ ನೀಡಿದ್ದಾರೆ.
ಹರದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ಆರೋಪಗಳ ಕುರಿತು ಲಿಯೋನೆಲ್ ಬಾರ್ಬರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಇಂತಹ ಕೃತ್ಯದಲ್ಲಿ ತೊಡಗುವುದು ಭಾರತದ ನೀತಿಯಲ್ಲ, ಹತ್ಯೆಗೆ ಸಂಬಂಧಿಸಿದಂತೆ ‘ನಿರ್ದಿಷ್ಟ ಮಾಹಿತಿ ಒದಗಿಸಿದರೆ ಅದನ್ನು ಪರಿಗಣಿಸಲು ಭಾರತ ಸಿದ್ಧವಿದೆ, ನಾವು ತನಿಖೆಯಿಂದ ಹಿಂದೆ ಸರಿಯುತ್ತಿಲ್ಲ ಎಂದರು. ಇದನ್ನು ಕೆನಡಾಗೆ ಈಗಾಗಲೇ ತಿಳಿಸಿರುವುದಾಗಿ ಜೈಶಂಕರ್ ಹೇಳಿದ್ದಾರೆ.
ನಿರ್ದಿಷ್ಟ ಪುರಾವೆಯನ್ನು ಯಾರು ನೀಡಿದರೂ ಭಾರತ ಅದನ್ನು ಪರಿಗಣಿಸುತ್ತದೆ. ಅದು ಕೆನಡಾ ವಿಷಯಕ್ಕೆ ಮಾತ್ರವಲ್ಲ, ಯಾವುದೇ ವಿವಾದಿತ ಘಟನೆ ಕುರಿತು ಯಾರಾದರೂ ನಿರ್ದಿಷ್ಟ ಮಾಹಿತಿ ನೀಡಿದರೆ ಖಂಡಿತ ಪರಿಗಣಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.