<p><strong>ದುಬೈ:</strong> ಯೆಮನ್ನಲ್ಲಿರುವ ಬಂಡುಕೋರರ ಗುಂಪಿಗೆ ಯುಎಇ ಶಸ್ತ್ರಾಸ್ತ್ರ ಪೂರೈಸಿದೆ ಎಂದು ಆರೋಪಿಸಿ ಸೌದಿ ಅರೇಬಿಯಾವು ಮಂಗಳವಾರ ಬಂದರು ನಗರ ಮುಕಾಲಾ ಮೇಲೆ ವಾಯು ದಾಳಿ ನಡೆಸಿದೆ. </p>.<p>ಯುಎಇಯ ನಡೆ ‘ಅತ್ಯಂತ ಅಪಾಯಕಾರಿ’ ಎಂದು ಸೌದಿ ಬಣ್ಣಿಸಿದೆ. ಆದರೆ, ಬಂಡುಕೋರರ ಗುಂಪಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪವನ್ನು ಯುಎಇ ಅಲ್ಲಗಳೆದಿದೆ. ವೈಮಾನಿಕ ದಾಳಿಯ ಬೆನ್ನಲ್ಲೇ ಯೆಮನ್ನ ಸೌದಿ ಬೆಂಬಲಿತ ಸರ್ಕಾರ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.</p>.<p>ಯುಎಇ ಬೆಂಬಲಿತ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್ (ಎಸ್ಟಿಸಿ) ಹೆಸರಿನ ಬಂಡುಕೋರರ ಗುಂಪು ಈಚೆಗೆ ಯೆಮನ್ನ ಬಂದರು ನಗರ ಮುಕಾಲಾ ಸೇರಿದಂತೆ ಕೆಲವು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದು ಸೌದಿ ಅರೇಬಿಯಾದ ಕೆಂಗಣ್ಣಿಗೆ ಕಾರಣವಾಗಿದೆ. </p>.<p>ತಾನು ವಶಪಡಿಸಿಕೊಂಡಿರುವ ಪ್ರದೇಶದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಸ್ಟಿಸಿ ಹೇಳಿದೆ. ‘ಹಿಂದಕ್ಕೆ ಸರಿಯುವ ಯಾವುದೇ ಚಿಂತನೆ ಇಲ್ಲ. ಭೂಮಾಲೀಕನಿಗೆ ತನ್ನ ಸ್ವಂತ ಭೂಮಿಯನ್ನು ಬಿಡುವಂತೆ ಹೇಳುವುದನ್ನು ಒಪ್ಪಲಾಗದು’ ಎಂದು ಎಸ್ಟಿಸಿ ವಕ್ತಾರ ಅನ್ವರ್ ಅಲ್ ತಮೀಮಿ ಹೇಳಿದ್ದಾರೆ.</p>.<p>ಈ ಬೆಳವಣಿಗೆಯು ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆಯಲ್ಲದೆ, ದಶಕಗಳಿಂದಲೂ ಯುದ್ಧದಿಂದ ಜರ್ಜರಿತವಾಗಿರುವ ಯೆಮನ್ನಲ್ಲಿ ಹೊಸ ಸಂಘರ್ಷದ ಭೀತಿ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಯೆಮನ್ನಲ್ಲಿರುವ ಬಂಡುಕೋರರ ಗುಂಪಿಗೆ ಯುಎಇ ಶಸ್ತ್ರಾಸ್ತ್ರ ಪೂರೈಸಿದೆ ಎಂದು ಆರೋಪಿಸಿ ಸೌದಿ ಅರೇಬಿಯಾವು ಮಂಗಳವಾರ ಬಂದರು ನಗರ ಮುಕಾಲಾ ಮೇಲೆ ವಾಯು ದಾಳಿ ನಡೆಸಿದೆ. </p>.<p>ಯುಎಇಯ ನಡೆ ‘ಅತ್ಯಂತ ಅಪಾಯಕಾರಿ’ ಎಂದು ಸೌದಿ ಬಣ್ಣಿಸಿದೆ. ಆದರೆ, ಬಂಡುಕೋರರ ಗುಂಪಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪವನ್ನು ಯುಎಇ ಅಲ್ಲಗಳೆದಿದೆ. ವೈಮಾನಿಕ ದಾಳಿಯ ಬೆನ್ನಲ್ಲೇ ಯೆಮನ್ನ ಸೌದಿ ಬೆಂಬಲಿತ ಸರ್ಕಾರ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.</p>.<p>ಯುಎಇ ಬೆಂಬಲಿತ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್ (ಎಸ್ಟಿಸಿ) ಹೆಸರಿನ ಬಂಡುಕೋರರ ಗುಂಪು ಈಚೆಗೆ ಯೆಮನ್ನ ಬಂದರು ನಗರ ಮುಕಾಲಾ ಸೇರಿದಂತೆ ಕೆಲವು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದು ಸೌದಿ ಅರೇಬಿಯಾದ ಕೆಂಗಣ್ಣಿಗೆ ಕಾರಣವಾಗಿದೆ. </p>.<p>ತಾನು ವಶಪಡಿಸಿಕೊಂಡಿರುವ ಪ್ರದೇಶದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಸ್ಟಿಸಿ ಹೇಳಿದೆ. ‘ಹಿಂದಕ್ಕೆ ಸರಿಯುವ ಯಾವುದೇ ಚಿಂತನೆ ಇಲ್ಲ. ಭೂಮಾಲೀಕನಿಗೆ ತನ್ನ ಸ್ವಂತ ಭೂಮಿಯನ್ನು ಬಿಡುವಂತೆ ಹೇಳುವುದನ್ನು ಒಪ್ಪಲಾಗದು’ ಎಂದು ಎಸ್ಟಿಸಿ ವಕ್ತಾರ ಅನ್ವರ್ ಅಲ್ ತಮೀಮಿ ಹೇಳಿದ್ದಾರೆ.</p>.<p>ಈ ಬೆಳವಣಿಗೆಯು ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆಯಲ್ಲದೆ, ದಶಕಗಳಿಂದಲೂ ಯುದ್ಧದಿಂದ ಜರ್ಜರಿತವಾಗಿರುವ ಯೆಮನ್ನಲ್ಲಿ ಹೊಸ ಸಂಘರ್ಷದ ಭೀತಿ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>