<p><strong>ಬೆಂಗಳೂರು</strong>: ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಜಲಾಂತರ್ಗಾಮಿ (ಸಬ್ಮರೈನ್) ಒಂದು ಕೆಂಪು ಸಮುದ್ರದಲ್ಲಿ ಅಪಘಾತಕ್ಕೀಡಾಗಿ 6 ಜನರು ಸ್ಥಳದಲ್ಲಿಯೇ ಮೃತಪಟ್ಟು 20 ಜನರು ಗಾಯಗೊಂಡಿರುವ ಘಟನೆ ಈಜಿಪ್ಟ್ ಬಳಿಯ ಹುರ್ಘಾಡಾ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದೆ.</p><p>ಘಟನೆಯಲ್ಲಿ ಒಟ್ಟು 39 ಜನರನ್ನು ರಕ್ಷಿಸಲಾಗಿದೆ. ಯಾರೂ ಕಾಣೆಯಾಗಿಲ್ಲ. ಮೃತ ಆರು ಜನರೆಲ್ಲ ರಷ್ಯಾ ಮೂಲದವರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಬಿಬಿಸಿ ವಾಹಿನಿ ವರದಿ ಮಾಡಿದೆ.</p><p>ಪ್ರವಾಸಿಗರ ಸಬ್ಮರೈನ್ನಲ್ಲಿ ಒಟ್ಟು 45 ಜನ ವಿಹಾರ ನಡೆಸುತ್ತಿದ್ದರು. ಇದರಲ್ಲಿ ರಷ್ಯಾ, ನಾರ್ವೆ, ಸ್ವಿಡನ್ ಮತ್ತು ಭಾರತದ ಪ್ರವಾಸಿಗರು ಇದ್ದರು ಎಂದು ತಿಳಿಸಿದ್ದಾರೆ.</p><p>ಸಮುದ್ರದಾಳದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಕಂಡುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಈ ಜಲಾಂತರ್ಗಾಮಿಯಲ್ಲಿ ಕೆಲವು ಭಾರತೀಯರೂ ಇದ್ದರು. ಅವರು ಸುರಕ್ಷಿತವಾಗಿದ್ದಾರೆ. ಬಹುತೇಕರು ರಷ್ಯಾದವರೇ ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಜಲಾಂತರ್ಗಾಮಿ (ಸಬ್ಮರೈನ್) ಒಂದು ಕೆಂಪು ಸಮುದ್ರದಲ್ಲಿ ಅಪಘಾತಕ್ಕೀಡಾಗಿ 6 ಜನರು ಸ್ಥಳದಲ್ಲಿಯೇ ಮೃತಪಟ್ಟು 20 ಜನರು ಗಾಯಗೊಂಡಿರುವ ಘಟನೆ ಈಜಿಪ್ಟ್ ಬಳಿಯ ಹುರ್ಘಾಡಾ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದೆ.</p><p>ಘಟನೆಯಲ್ಲಿ ಒಟ್ಟು 39 ಜನರನ್ನು ರಕ್ಷಿಸಲಾಗಿದೆ. ಯಾರೂ ಕಾಣೆಯಾಗಿಲ್ಲ. ಮೃತ ಆರು ಜನರೆಲ್ಲ ರಷ್ಯಾ ಮೂಲದವರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಬಿಬಿಸಿ ವಾಹಿನಿ ವರದಿ ಮಾಡಿದೆ.</p><p>ಪ್ರವಾಸಿಗರ ಸಬ್ಮರೈನ್ನಲ್ಲಿ ಒಟ್ಟು 45 ಜನ ವಿಹಾರ ನಡೆಸುತ್ತಿದ್ದರು. ಇದರಲ್ಲಿ ರಷ್ಯಾ, ನಾರ್ವೆ, ಸ್ವಿಡನ್ ಮತ್ತು ಭಾರತದ ಪ್ರವಾಸಿಗರು ಇದ್ದರು ಎಂದು ತಿಳಿಸಿದ್ದಾರೆ.</p><p>ಸಮುದ್ರದಾಳದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಕಂಡುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಈ ಜಲಾಂತರ್ಗಾಮಿಯಲ್ಲಿ ಕೆಲವು ಭಾರತೀಯರೂ ಇದ್ದರು. ಅವರು ಸುರಕ್ಷಿತವಾಗಿದ್ದಾರೆ. ಬಹುತೇಕರು ರಷ್ಯಾದವರೇ ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>