ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸ್ವಾತಿ, ‘ಈ ಪ್ರಶಸ್ತಿಯ ಹಿಂದೆ ಬಹಳಷ್ಟು ವಿಷಯಗಳು ಅಡಗಿವೆ. ಆದರೆ, ನನ್ನ ಕರ್ತವ್ಯ ನಾನು ಮಾಡಿದ್ದಕ್ಕೆ ಶೌರ್ಯ ಪ್ರಶಸ್ತಿ ಪಡೆಯಬೇಕಾಗಿರುವುದು ಖೇದಕರ. ಪರ್ತಕರ್ತರು ತಾವು ಮಾಡುವ ಕೆಲಸವನ್ನು ನಿಲ್ಲಿಸುವಂತಹ ಸ್ಥಿತಿ ಉಂಟಾಗಿದೆ ಎಂದು ನಾನು ಯೋಚಿಸುವುದಿಲ್ಲ. ಆದರೆ, ವಿಶ್ವದಾದ್ಯಂತ ಎಲ್ಲ ಸರ್ಕಾರಗಳು ತಮ್ಮ ವಿರುದ್ಧದ ಟೀಕೆಗೆ ತುಂಬಾ ಅಸಹಿಷ್ಣುಗಳಾಗಿವೆ’ ಎಂದು ಹೇಳಿದರು.