<p><strong>ಡಮಾಸ್ಕಸ್</strong>: ಸಿರಿಯಾದಲ್ಲಿನ ದುರೂಸ್ ಪಂಗಡದ ರಕ್ಷಣೆಗೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದ ಬೆನ್ನಲ್ಲೇ, ದಕ್ಷಿಣ ಸ್ವೀಡಾ ಪ್ರಾಂತ್ಯದಿಂದ ಸಿರಿಯಾದ ಸರ್ಕಾರಿ ಪಡೆ ವಾಪಾಸ್ಸಾಗಿದೆ. </p><p>ದುರೂಸ್ ಪಂಗಡ ಮತ್ತು ಬೆಡೊಯಿನ್ ಬುಡಕಟ್ಟು ಪಂಗಡದ ನಡುವೆ ದಕ್ಷಿಣ ಸ್ವೀಡಾದಲ್ಲಿ ಉಂಟಾದ ಸಂಘರ್ಷ ತಡೆಯಲು ಸಿರಿಯಾ ಸರ್ಕಾರಿ ಪಡೆಯು ಸ್ವೀಡಾ ಪ್ರವೇಶಿಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಸೇನೆ ಬುಧವಾರ ಡಮಾಸ್ಕಸ್ನಲ್ಲಿರುವ ಸಿರಿಯಾದ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. </p><p>‘ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಅಲ್ಲಿನ ಆಂತರಿಕ ಭದ್ರತೆ ಕಾಪಾಡಲು ದುರೂಸ್ ಪಂಗಡದ ಧರ್ಮಗುರುಗಳನ್ನು ನಿಯೋಜಿಸಲಾಗಿದೆ’ ಎಂದು ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹಮದ್ ಅಲ್ – ಶಾರಾ ಗುರುವಾರ ಹೇಳಿದ್ದಾರೆ. </p><p>ಅಮೆರಿಕ, ಟರ್ಕಿ ಮತ್ತು ಅರಬ್ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ದುರೂಸ್ ಮುಖಂಡರು ಮತ್ತು ಸಿರಿಯಾದ ಸರ್ಕಾರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. </p><p>ದುರೂಸ್ ಪಂಗಡ– ಬೆಡೊಯಿನ್ ಬುಡಕಟ್ಟು ಪಂಗಡದ ನಡುವಿನ ಘರ್ಷಣೆ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ 374 ಜನರು ಮೃತಪಟ್ಟಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಘಟನೆಯೊಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡಮಾಸ್ಕಸ್</strong>: ಸಿರಿಯಾದಲ್ಲಿನ ದುರೂಸ್ ಪಂಗಡದ ರಕ್ಷಣೆಗೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದ ಬೆನ್ನಲ್ಲೇ, ದಕ್ಷಿಣ ಸ್ವೀಡಾ ಪ್ರಾಂತ್ಯದಿಂದ ಸಿರಿಯಾದ ಸರ್ಕಾರಿ ಪಡೆ ವಾಪಾಸ್ಸಾಗಿದೆ. </p><p>ದುರೂಸ್ ಪಂಗಡ ಮತ್ತು ಬೆಡೊಯಿನ್ ಬುಡಕಟ್ಟು ಪಂಗಡದ ನಡುವೆ ದಕ್ಷಿಣ ಸ್ವೀಡಾದಲ್ಲಿ ಉಂಟಾದ ಸಂಘರ್ಷ ತಡೆಯಲು ಸಿರಿಯಾ ಸರ್ಕಾರಿ ಪಡೆಯು ಸ್ವೀಡಾ ಪ್ರವೇಶಿಸಿತ್ತು. ಇದರ ಬೆನ್ನಲ್ಲೇ ಇಸ್ರೇಲ್ ಸೇನೆ ಬುಧವಾರ ಡಮಾಸ್ಕಸ್ನಲ್ಲಿರುವ ಸಿರಿಯಾದ ರಕ್ಷಣಾ ಸಚಿವಾಲಯವನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. </p><p>‘ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಅಲ್ಲಿನ ಆಂತರಿಕ ಭದ್ರತೆ ಕಾಪಾಡಲು ದುರೂಸ್ ಪಂಗಡದ ಧರ್ಮಗುರುಗಳನ್ನು ನಿಯೋಜಿಸಲಾಗಿದೆ’ ಎಂದು ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹಮದ್ ಅಲ್ – ಶಾರಾ ಗುರುವಾರ ಹೇಳಿದ್ದಾರೆ. </p><p>ಅಮೆರಿಕ, ಟರ್ಕಿ ಮತ್ತು ಅರಬ್ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ ದುರೂಸ್ ಮುಖಂಡರು ಮತ್ತು ಸಿರಿಯಾದ ಸರ್ಕಾರಿ ಅಧಿಕಾರಿಗಳ ನಡುವೆ ಮಾತುಕತೆ ನಡೆದು ಸ್ವೀಡಾದಲ್ಲಿ ಕದನ ವಿರಾಮ ಘೋಷಿಸಲಾಗಿತ್ತು. </p><p>ದುರೂಸ್ ಪಂಗಡ– ಬೆಡೊಯಿನ್ ಬುಡಕಟ್ಟು ಪಂಗಡದ ನಡುವಿನ ಘರ್ಷಣೆ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ 374 ಜನರು ಮೃತಪಟ್ಟಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಘಟನೆಯೊಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>