<p><strong>ಕುವೈತ್:</strong> ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿದ 63 ಜನರಲ್ಲಿ 13 ಮಂದಿ ಮೃತಪಟ್ಟು, 21 ಜನ ಶಾಶತ್ವವಾಗಿ ಕುರುಡರಾಗಿದ್ದಾರೆ ಎಂದು ಕುವೈತ್ನ ಆರೋಗ್ಯ ಸಚಿವಾಲಯವು ಹೇಳಿದೆ.</p><p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಚಿವಾಲಯವು, ‘ಇವರೆಲ್ಲರೂ ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 50 ಜನರಿಗೆ ತಕ್ಷಣ ಡಯಾಲಿಸಿಸ್ನ ಅಗತ್ಯವಿದೆ. ಬದುಕುಳಿದಿರುವ 31 ಜನರನ್ನು ವೆಂಟಿಲೇಟರ್ನಲ್ಲಿ ಇಡಲಾಗಿದೆ’ ಎಂದಿದೆ.</p><p>ಮದ್ಯ ತಯಾರಿಕೆ ಅಥವಾ ಆಮದು ಮಾಡಿಕೊಳ್ಳುವುದಕ್ಕೆ ಕುವೈತ್ನಲ್ಲಿ ನಿಷೇಧ ಹೇರಲಾಗಿದೆ. ಹೀಗಿದ್ದರೂ, ಕೆಲವರು ಅಕ್ರಮವಾಗಿ ಮದ್ಯ ತಯಾರಿಸುತ್ತಾರೆ. ಯಾವುದೇ ಗುಣಮಟ್ಟ ಕಾಯ್ದುಕೊಳ್ಳದ ಇಂಥ ಮದ್ಯವನ್ನು ಗ್ರಾಹಕರು ಸೇವಿಸಿದ್ದರಿಂದ ಅನಾಹುತ ಸಂಭವಿಸಿದೆ ಎಂದಿದ್ದಾರೆ.</p><p>‘ಕಳೆದ ಐದು ದಿನಗಳಲ್ಲಿ ಇಂಥ ಕಳಪೆ ಗುಣಮಟ್ಟದ ಮದ್ಯ ಸೇವಿಸಿ 40 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಕೆಲವರು ಮೃತಪಟ್ಟಿದ್ದಾರೆ’ ಎಂದು ಭಾರತದ ರಾಯಭಾರ ಕಚೇರಿಗೆ ಕುವೈತ್ ಮಾಹಿತಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುವೈತ್:</strong> ಕಲುಷಿತ ಮದ್ಯದಿಂದ ವಿಷವಾದ ಮೆಥನಾಲ್ ಸೇವಿಸಿದ 63 ಜನರಲ್ಲಿ 13 ಮಂದಿ ಮೃತಪಟ್ಟು, 21 ಜನ ಶಾಶತ್ವವಾಗಿ ಕುರುಡರಾಗಿದ್ದಾರೆ ಎಂದು ಕುವೈತ್ನ ಆರೋಗ್ಯ ಸಚಿವಾಲಯವು ಹೇಳಿದೆ.</p><p>ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಚಿವಾಲಯವು, ‘ಇವರೆಲ್ಲರೂ ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 50 ಜನರಿಗೆ ತಕ್ಷಣ ಡಯಾಲಿಸಿಸ್ನ ಅಗತ್ಯವಿದೆ. ಬದುಕುಳಿದಿರುವ 31 ಜನರನ್ನು ವೆಂಟಿಲೇಟರ್ನಲ್ಲಿ ಇಡಲಾಗಿದೆ’ ಎಂದಿದೆ.</p><p>ಮದ್ಯ ತಯಾರಿಕೆ ಅಥವಾ ಆಮದು ಮಾಡಿಕೊಳ್ಳುವುದಕ್ಕೆ ಕುವೈತ್ನಲ್ಲಿ ನಿಷೇಧ ಹೇರಲಾಗಿದೆ. ಹೀಗಿದ್ದರೂ, ಕೆಲವರು ಅಕ್ರಮವಾಗಿ ಮದ್ಯ ತಯಾರಿಸುತ್ತಾರೆ. ಯಾವುದೇ ಗುಣಮಟ್ಟ ಕಾಯ್ದುಕೊಳ್ಳದ ಇಂಥ ಮದ್ಯವನ್ನು ಗ್ರಾಹಕರು ಸೇವಿಸಿದ್ದರಿಂದ ಅನಾಹುತ ಸಂಭವಿಸಿದೆ ಎಂದಿದ್ದಾರೆ.</p><p>‘ಕಳೆದ ಐದು ದಿನಗಳಲ್ಲಿ ಇಂಥ ಕಳಪೆ ಗುಣಮಟ್ಟದ ಮದ್ಯ ಸೇವಿಸಿ 40 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಕೆಲವರು ಮೃತಪಟ್ಟಿದ್ದಾರೆ’ ಎಂದು ಭಾರತದ ರಾಯಭಾರ ಕಚೇರಿಗೆ ಕುವೈತ್ ಮಾಹಿತಿ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>