ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಅಫ್ಗಾನ್ ಪ್ರತಿಭಟನಾಕಾರರಿಗೆ ತಾಲಿಬಾನ್‌ ಸಂಧಾನದ ಸಂದೇಶ: ರಷ್ಯಾ ರಾಯಭಾರಿ

Last Updated 22 ಆಗಸ್ಟ್ 2021, 7:12 IST
ಅಕ್ಷರ ಗಾತ್ರ

ಕಾಬೂಲ್: ಉತ್ತರ ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಸಂಧಾನಕ್ಕೆ ಸಿದ್ಧವಿರುವುದಾಗಿ ಅವರಿಗೆ ತಿಳಿಸುವಂತೆ ತಾಲಿಬಾನ್ ನಾಯಕರು ತಮಗೆ ಹೇಳಿದ್ದಾಗಿ ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರಿ ಮಾಹಿತಿ ನೀಡಿದ್ದಾರೆ.

ಪಂಜ್ಶಿರ್ ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಜತೆ ರಾಜಕೀಯ ಸಂಧಾನಕ್ಕೆ ತಾಲಿಬಾನ್ ಮುಂದಾಗಿದೆ. ಈ ಕುರಿತು ತಾಲಿಬಾನ್‌ನ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ ಎಂದು ರಷ್ಯಾ ರಾಯಭಾರಿ ಡಿಮಿಟ್ರಿ ಜಿರ್ನೋವ್ ತಿಳಿಸಿದ್ದಾರೆ.

ಪಂಜ್ಶಿರ್ ಕಣಿವೆ ಪ್ರದೇಶದಲ್ಲಿ ರಕ್ತಪಾತ ನಡೆಸುವುದು ಬೇಕಿಲ್ಲ. ಹೀಗಾಗಿ ಮಾತುಕತೆಗೆ ಮುಂದಾಗಿರುವುದಾಗಿ ತಾಲಿಬಾನ್ ನಾಯಕರು ಹೇಳಿದ್ದಾರೆ ಎಂದು ಜಿರ್ನೋವ್ ತಿಳಿಸಿದ್ದಾರೆ.

ಕಾಬೂಲ್‌ನ ಉತ್ತರಕ್ಕಿರುವ ಪಂಜ್ಶಿರ್‌ ಕಣಿವೆಯು ತಾಲಿಬಾನ್‌ ವಿರೋಧಿಸುವವರ ಪ್ರಬಲ ಒಕ್ಕೂಟ ಹೊಂದಿದ್ದು, ಇದು 2001ರಿಂದ ಅಮೆರಿಕ ಪಡೆಗಳ ಜತೆ ಮೈತ್ರಿ ಮಾಡಿಕೊಂಡಿದೆ. ಸದ್ಯ ಕಣಿವೆಯು ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ವಶವಾಗದಿರುವ ಏಕೈಕ ಪ್ರದೇಶವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT