<p><strong>ಇಸ್ಲಾಮಾಬಾದ್</strong>: ‘ದಾಳಿ ಮುಂದುವರಿಸುವುದನ್ನು ಭಾರತ ನಿಲ್ಲಿಸಿದರೆ ಉದ್ವಿಗ್ನತೆ ಶಮನಗೊಳಿಸುವ ಬಗ್ಗೆ ನಾವು ಯೋಚಿಸುತ್ತೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಸಾಕ್ ದಾರ್ ಶನಿವಾರ ಹೇಳಿದ್ದಾರೆ.</p><p>ಅದಾಗ್ಯೂ, ಭಾರತ ದಾಳಿ ಮುಂದುವರಿಸಿದರೆ ಪಾಕಿಸ್ತಾನ ಅದಕ್ಕೆ ಪ್ರತ್ಯುತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.</p><p>ಭಾರತ–ಪಾಕ್ ನಡುವಿನ ಉದ್ವಿಗ್ನತೆ ಬಗ್ಗೆ ಜಿಯೊ ನ್ಯೂಸ್ನೊಂದಿಗೆ ಮಾತನಾಡಿದ ಅವರು, ‘ಪ್ರಾಬಲ್ಯ ಸಾಧಿಸಲು ಭಾರತಕ್ಕೆ ಪಾಕಿಸ್ತಾನ ಅವಕಾಶ ಮಾಡಿಕೊಡುವುದಿಲ್ಲ’ ಎಂದಿದ್ದಾರೆ.</p><p>‘ಕಳೆದ ಮೂರು ದಿನಗಳಿಂದ ಭಾರತ ಸರ್ಕಸ್ ನಡೆಸುತ್ತಿದೆ. ಭಾರತದ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಹೇಳಿದ್ದಾರೆ.</p><p>‘ನಾವು ಇಂದು ಪ್ರಾರಂಭಿಸಿದ ಕಾರ್ಯಾಚರಣೆಯು ಒಂದಲ್ಲ ಒಂದು ರೀತಿಯಲ್ಲಿ ಕೊನೆಗೊಳ್ಳುತ್ತದೆ. ಇದೆಲ್ಲವೂ ಭಾರತ ಏನು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದ್ದಾರೆ.</p><p>‘ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ. ಆದ್ದರಿಂದ ನೂರ್ ಖಾನ್ ವಾಯುನೆಲೆಯ ಮೇಲಿನ ದಾಳಿಯ ನಂತರ ನಮ್ಮ ಸೇನೆಯು ಪ್ರತೀಕಾರ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಇನ್ನು ತಾಳ್ಮೆ ಇಲ್ಲ. ನಾವು ಅವರಿಗೆ ಪ್ರತಿಕ್ರಿಯೆ ನೀಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.</p><p>ಏನತ್ಮಧ್ಯೆ, ಉದ್ವಿಗ್ನತೆಯನ್ನು ಶಮನಗೊಳಿಸುವುದು ಭಾರತದ ಕೈಯಲ್ಲಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅಟ್ಟಾ ತರಾರ್ ಅವರು ಬಿಬಿಸಿಗೆ ತಿಳಿಸಿದ್ದಾರೆ.</p>.<p><strong>ಅಣ್ವಸ್ತ್ರ ಬಳಕೆ ನಮ್ಮ ಸದ್ಯದ ಆಯ್ಕೆಯಲ್ಲ: ಖ್ವಾಜಾ ಆಸಿಫ್</strong></p><p><strong>ಲಾಹೋರ್: </strong>‘ಭಾರತದ ವಿರುದ್ಧ ಅಣ್ವಸ್ತ್ರ ಬಳಸುವುದು ಸದ್ಯದ ಆಯ್ಕೆಯಲ್ಲ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ.</p><p>‘ಅಣ್ವಸ್ತ್ರ ಬಳಕೆ ನಮ್ಮ ಆಯ್ಕೆಯಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಂತಹ ಸ್ಥಿತಿ ಎದುರಾದರೆ ಉಭಯ ರಾಷ್ಟ್ರಗಳಿಗೂ ತೀವ್ರ ಅಪಾಯ ಉಂಟಾಗಲಿದೆ’ ಎಂದು ‘ಜಿಯೋ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>‘ಈ ವಿಷಯವನ್ನು ಕೇವಲ ಪ್ರಾದೇಶಿಕತೆಗಷ್ಟೇ ಅಪಾಯ ಉಂಟು ಮಾಡಲಿದೆ ಎಂದು ಪರಿಮಿತಿಗೊಳಿಸಬೇಕಿಲ್ಲ. ಅದಕ್ಕಿಂತಲೂ ದೊಡ್ಡದಾಗಿರಲಿದೆ. ಭಾರತವು ನಿರ್ಮಾಣ ಮಾಡಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವುದೇ ನಮ್ಮ ಮುಂದಿರುವ ಆಯ್ಕೆಯಾಗಿದೆ’ ಎಂದು ತಿಳಿಸಿದರು.</p><p>ಇದುವರೆಗೂ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್ಸಿಎ) ಸಭೆ ನಡೆಸಿಲ್ಲ ಎಂದು ಈ ವೇಳೆ ಆಸಿಫ್ ಸ್ಪಷ್ಟಪಡಿಸಿದರು.</p><p>ಪಾಕಿಸ್ತಾನ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ಎನ್ಸಿಎ ವಹಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>: ‘ದಾಳಿ ಮುಂದುವರಿಸುವುದನ್ನು ಭಾರತ ನಿಲ್ಲಿಸಿದರೆ ಉದ್ವಿಗ್ನತೆ ಶಮನಗೊಳಿಸುವ ಬಗ್ಗೆ ನಾವು ಯೋಚಿಸುತ್ತೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಸಾಕ್ ದಾರ್ ಶನಿವಾರ ಹೇಳಿದ್ದಾರೆ.</p><p>ಅದಾಗ್ಯೂ, ಭಾರತ ದಾಳಿ ಮುಂದುವರಿಸಿದರೆ ಪಾಕಿಸ್ತಾನ ಅದಕ್ಕೆ ಪ್ರತ್ಯುತ್ತರ ನೀಡಲಿದೆ ಎಂದು ತಿಳಿಸಿದ್ದಾರೆ.</p><p>ಭಾರತ–ಪಾಕ್ ನಡುವಿನ ಉದ್ವಿಗ್ನತೆ ಬಗ್ಗೆ ಜಿಯೊ ನ್ಯೂಸ್ನೊಂದಿಗೆ ಮಾತನಾಡಿದ ಅವರು, ‘ಪ್ರಾಬಲ್ಯ ಸಾಧಿಸಲು ಭಾರತಕ್ಕೆ ಪಾಕಿಸ್ತಾನ ಅವಕಾಶ ಮಾಡಿಕೊಡುವುದಿಲ್ಲ’ ಎಂದಿದ್ದಾರೆ.</p><p>‘ಕಳೆದ ಮೂರು ದಿನಗಳಿಂದ ಭಾರತ ಸರ್ಕಸ್ ನಡೆಸುತ್ತಿದೆ. ಭಾರತದ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಹೇಳಿದ್ದಾರೆ.</p><p>‘ನಾವು ಇಂದು ಪ್ರಾರಂಭಿಸಿದ ಕಾರ್ಯಾಚರಣೆಯು ಒಂದಲ್ಲ ಒಂದು ರೀತಿಯಲ್ಲಿ ಕೊನೆಗೊಳ್ಳುತ್ತದೆ. ಇದೆಲ್ಲವೂ ಭಾರತ ಏನು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದ್ದಾರೆ.</p><p>‘ಪಾಕಿಸ್ತಾನಕ್ಕೆ ಬೇರೆ ದಾರಿ ಇರಲಿಲ್ಲ. ಆದ್ದರಿಂದ ನೂರ್ ಖಾನ್ ವಾಯುನೆಲೆಯ ಮೇಲಿನ ದಾಳಿಯ ನಂತರ ನಮ್ಮ ಸೇನೆಯು ಪ್ರತೀಕಾರ ತೆಗೆದುಕೊಳ್ಳುವ ನಿರ್ಧಾರ ಮಾಡಿತು. ಇನ್ನು ತಾಳ್ಮೆ ಇಲ್ಲ. ನಾವು ಅವರಿಗೆ ಪ್ರತಿಕ್ರಿಯೆ ನೀಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.</p><p>ಏನತ್ಮಧ್ಯೆ, ಉದ್ವಿಗ್ನತೆಯನ್ನು ಶಮನಗೊಳಿಸುವುದು ಭಾರತದ ಕೈಯಲ್ಲಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅಟ್ಟಾ ತರಾರ್ ಅವರು ಬಿಬಿಸಿಗೆ ತಿಳಿಸಿದ್ದಾರೆ.</p>.<p><strong>ಅಣ್ವಸ್ತ್ರ ಬಳಕೆ ನಮ್ಮ ಸದ್ಯದ ಆಯ್ಕೆಯಲ್ಲ: ಖ್ವಾಜಾ ಆಸಿಫ್</strong></p><p><strong>ಲಾಹೋರ್: </strong>‘ಭಾರತದ ವಿರುದ್ಧ ಅಣ್ವಸ್ತ್ರ ಬಳಸುವುದು ಸದ್ಯದ ಆಯ್ಕೆಯಲ್ಲ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಿಳಿಸಿದ್ದಾರೆ.</p><p>‘ಅಣ್ವಸ್ತ್ರ ಬಳಕೆ ನಮ್ಮ ಆಯ್ಕೆಯಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಂತಹ ಸ್ಥಿತಿ ಎದುರಾದರೆ ಉಭಯ ರಾಷ್ಟ್ರಗಳಿಗೂ ತೀವ್ರ ಅಪಾಯ ಉಂಟಾಗಲಿದೆ’ ಎಂದು ‘ಜಿಯೋ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.</p><p>‘ಈ ವಿಷಯವನ್ನು ಕೇವಲ ಪ್ರಾದೇಶಿಕತೆಗಷ್ಟೇ ಅಪಾಯ ಉಂಟು ಮಾಡಲಿದೆ ಎಂದು ಪರಿಮಿತಿಗೊಳಿಸಬೇಕಿಲ್ಲ. ಅದಕ್ಕಿಂತಲೂ ದೊಡ್ಡದಾಗಿರಲಿದೆ. ಭಾರತವು ನಿರ್ಮಾಣ ಮಾಡಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವುದೇ ನಮ್ಮ ಮುಂದಿರುವ ಆಯ್ಕೆಯಾಗಿದೆ’ ಎಂದು ತಿಳಿಸಿದರು.</p><p>ಇದುವರೆಗೂ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (ಎನ್ಸಿಎ) ಸಭೆ ನಡೆಸಿಲ್ಲ ಎಂದು ಈ ವೇಳೆ ಆಸಿಫ್ ಸ್ಪಷ್ಟಪಡಿಸಿದರು.</p><p>ಪಾಕಿಸ್ತಾನ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ಜವಾಬ್ದಾರಿಯನ್ನು ಎನ್ಸಿಎ ವಹಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>