ಲಂಡನ್ (ಐಎಎನ್ಎಸ್): ಬ್ರಿಟನ್ ಸಂಸತ್ತಿನಲ್ಲಿ `ಆಧುನಿಕ ಭಾರತದ ಭವಿಷ್ಯ' ಎಂಬ ವಿಷಯದ ಮೇಲೆ ಭಾಷಣ ಮಾಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವ ಲೇಬರ್ ಪಕ್ಷದ ಸಂಸದ ಬೆರಿ ಗಾರ್ಡಿನರ್ ಕ್ರಮವನ್ನು ಬ್ರಿಟನ್ನಲ್ಲಿನ ಭಾರತ ಮೂಲದ ಮುಸ್ಲಿಮರು ವಿರೋಧಿಸಿದ್ದಾರೆ.
ಮೋದಿ ಅವರು ಭಾರತದ ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಯಾಗಿರುವುದರಿಂದ ಅವರನ್ನು ಭಾಷಣ ಮಾಡಲು ಕರೆದಿರುವ ತಮ್ಮ ನಿರ್ಧಾರ ಸರಿಯಾದುದು ಎಂದು ಲೇಬರ್ ಫ್ರೆಂಡ್ಸ್ ಆಫ್ ಇಂಡಿಯಾ ವೇದಿಕೆಯ ಅಧ್ಯಕ್ಷರೂ ಆಗಿರುವ ಗಾರ್ಡಿನರ್ ಸಮರ್ಥಿಸಿಕೊಂಡಿದ್ದಾರೆ.