ಕಳೆದ ಎರಡು ವಾರಗಳಿಂದ ಅಲ್ಲಿನ ಸರ್ಕಾರ ಮತ್ತು ಇಸ್ಲಾಮಿಕ್ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ರಾಜಧಾನಿ ತ್ರಿಪೋಲಿ ಮತ್ತು ಬೆಂಗ್ಹಾಜ್ಹಿಯಲ್ಲಿ 150ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಈ ನಡುವೆ ಬಂಡುಕೋರರು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವುದರಿಂದ ನರ್ಸ್ಗಳು ತಮ್ಮನ್ನು ರಕ್ಷಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ಲಿಬಿಯಾದಲ್ಲಿರುವ ಭಾರತೀಯ ರಾಯಭಾರಿ ಅಜರ್ ಎ.ಹೆಚ್. ಖಾನ್ ಅವರು ತ್ರಿಪೋಲಿಯಲ್ಲಿರುವ ಭಾರತೀಯ ದಾದಿಯರನ್ನು ಭೇಟಿ ಮಾಡಿ ಅವರ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದಾರೆ.
‘ಇಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ನಾವು ದಾದಿಯರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ’ ಎಂದು ಖಾನ್ ಅವರು ತಿಳಿಸಿದ್ದಾರೆ.
ತ್ರಿಪೋಲಿಯ ಎರಡು ಆಸ್ಪತ್ರೆಗಳಲ್ಲಿ 430 ಭಾರತೀಯ ದಾದಿಯರಿದ್ದು, 88 ಜನ ಮಾತ್ರ ಸಹಾಯಕ್ಕಾಗಿ ಭಾರತೀಯ ದೂತವಾಸವನ್ನು ಸಂಪರ್ಕಿಸಿದ್ದಾರೆ.