ವಿಶ್ವಸಂಸ್ಥೆ: ಸಂಸತ್ನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಅವರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಸೋಮವಾರ ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿ ಮಾತೃಭಾಷಾ ಪ್ರೇಮ ಮೆರೆದರು.
ವಿಶ್ವಸಂಸ್ಥೆಗೆ ತೆರಳಿರುವ ನಿಯೋಗದಲ್ಲಿರುವ ಅವರು, `ನರಮೇಧ ಮತ್ತು ಇನ್ನಿತರ ಹೇಯ ಅಪರಾಧ ಕುರಿತ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ವರದಿ~ ಬಗ್ಗೆ ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಅನಂತಕುಮಾರ್, ಸಭಿಕರಿಗೆ ಶುಭ ಕೋರಿದರು. ವಿಶ್ವಸಂಸ್ಥೆಯ ವೇದಿಕೆ ಮೇಲೆಯೂ ಕನ್ನಡಾಭಿಮಾನ ಮೆರೆದ ಅನಂತ್ಕುಮಾರ್, ತಮ್ಮ ಭಾಷಣದ ಆರಂಭದ ಸಾಲುಗಳನ್ನು ಇಂಗ್ಲಿಷ್ಗೆ ಅನುವಾದಿಸಿದರು.