<p>ಸೋಲ್ (ಪಿಟಿಐ): ಭಾರತದಲ್ಲಿ ಅಣು ಸ್ಥಾವರಗಳನ್ನು ಸ್ಥಾಪಿಸಲು ದಕ್ಷಿಣ ಕೊರಿಯಾ ಉತ್ಸುಕವಾಗಿರುವ ಬೆನ್ನಲ್ಲೇ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಅಣುಶಕ್ತಿ ವಿಸ್ತರಣಾ ಕಾರ್ಯಕ್ರಮಕ್ಕೆ ನೆರವು ನೀಡುವಂತೆ ಇಲ್ಲಿನ ಉದ್ಯಮಿಗಳನ್ನು ಕೋರಿದ್ದಾರೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣುಶಕ್ತಿ ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ.<br /> <br /> ಪರಮಾಣು ಭದ್ರತೆ ಸಮಾವೇಶಕ್ಕೆ ಆಗಮಿಸಿರುವ ಪ್ರಧಾನಿ ಸಿಂಗ್ ಅವರಿಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಾವಕಾಶ ನೀಡಲು ಕೋರಿದ್ದರು. <br /> <br /> `ನವೀಕರಿಸಬಹುದಾದ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ದ್ವಿಗುಣಗೊಳಿಸುವ ಗುರಿಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣು ಶಕ್ತಿಗಳ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು~ ಎಂದು ಅವರು ದ.ಕೊರಿಯಾದ ಅಗ್ರ ಉದ್ದಿಮೆಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ತಿಳಿಸಿದ್ದಾರೆ.<br /> <br /> `ಭಾರತದಲ್ಲಿ ಉದ್ಯಮ ವಿಸ್ತರಣೆಗೆ ಬಹಳಷ್ಟು ಅವಕಾಶಗಳಿವೆ. ಕೊರಿಯಾದವರು ಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ನಿಪುಣರು ಎಂಬುದನ್ನು ನಾನು ಬಲ್ಲೆ~ ಎಂದು ದಕ್ಷಿಣ ಕೊರಿಯಾದ ವಾಣಿಜ್ಯೋದ್ಯಮ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮನಮೋಹನ್ ಸಿಂಗ್ ಹೇಳಿದರು.<br /> <br /> ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳ ಎನ್ನುವುದನ್ನು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ, ಕೆಲವು ವರ್ಷಗಳಿಂದ ಭಾರತದ ಅಭಿವೃದ್ಧಿ ಸೂಚ್ಯಂಕವು ಶೇ 7ರಷ್ಟಿದೆ. ಇದನ್ನು ಶೇ 10ಕ್ಕೆ ಏರಿಸುವ ನಿಟ್ಟಿನಲ್ಲಿ ಕೆಲವು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದರು.<br /> <br /> ಒಡಿಶಾದಲ್ಲಿ ಸ್ಥಳೀಯರ ವಿರೋಧದಿಂದ ಸ್ಥಗಿತವಾಗಿರುವ ಪೋಸ್ಕೊ ಯೋಜನೆಯ ಪುನರ್ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮತ್ತೆ ಭರವಸೆ ನೀಡಿರುವ ಅವರು, ಭಾರತವನ್ನು ನಂಬಿ ಎಂದರು.<br /> <strong><br /> ಭೂರಿ ಭೋಜನ</strong><br /> (ಐಎಎನ್ಎಸ್ ವರದಿ): ಸಮಾವೇಶಕ್ಕೆ ಆಗಮಿಸಿರುವ ಗಣ್ಯರ ಆತಿಥ್ಯಕ್ಕೆ ಭೂರಿ ಭೋಜನವೇ ಕಾದಿದೆ. ಪಾಶ್ಚಿಮಾತ್ಯ ಮತ್ತು ಕೊರಿಯಾ ಶೈಲಿಯ ರಸದೌಣವನ್ನು ಅತಿಥೇಯ ದಕ್ಷಿಣ ಕೊರಿಯಾ ನೀಡಲಿದೆ. 58 ವಿವಿಧ ದೇಶಗಳಿಂದ ಈ ಸಮಾವೇಶಕ್ಕೆ ಗಣ್ಯರು ಆಗಮಿಸಿದ್ದು, ಭಾಷಾ ತೊಡಕು ನಿವಾರಿಸಲು ವಿವಿಧ ದೇಶಗಳಿಂದ 51 ಭಾಷಾಂತರಕಾರರು ಆಗಮಿಸಿದ್ದಾರೆ. ಹಿಂದಿ, ಇಂಗ್ಲಿಷ್, ಚೈನಿ, ಜಪಾನಿ ಸೇರಿದಂತೆ 18 ಭಾಷೆಗಳನ್ನು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲಿದ್ದಾರೆ.<br /> <br /> <strong>ಒಬಾಮ ಭೇಟಿ</strong><br /> ಪರಮಾಣು ಭದ್ರತಾ ಸಮಾವೇಶಕ್ಕೆ ಇಲ್ಲಿಗೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಔತಣಕೂಟದ ವೇಳೆ ಆಲಂಗಿ ಸಿಕೊಂಡು ಯೋಗಕ್ಷೇಮ ವಿಚಾರಿಸಿದರು.<br /> <br /> ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಮನಮೋಹನ್ ಸಿಂಗ್ ಕುಶಲ ವಿಚಾರಿಸಿದರು.</p>.<table align="center" border="2" cellpadding="1" cellspacing="1" width="450"> <tbody> <tr> <td><strong>ಟ್ಯಾಬ್ಲೆಟ್ ಉಡುಗೊರೆ <br /> </strong>ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ವದೇಶಕ್ಕೆ ಹಿಂದಿರುಗುವಾಗ, ಅಗತ್ಯಕ್ಕೆ ತಕ್ಕಂತೆ ಮರು ರೂಪಿಸಿದ ಮತ್ತು ಕೊರಿಯಾದ ವಿಶಿಷ್ಟ ಕಲೆಯಿಂದ ವಿನ್ಯಾಸಗೊಳಿಸಿದ ಸ್ಯಾಮ್ಸಂಗ್ ಕಂಪೆನಿಯ ಅತ್ಯಾಧುನಿಕ ಟ್ಯಾಬ್ಲೆಟ್ನ್ನು ಜೊತೆಯಲ್ಲಿ ತರಲಿದ್ದಾರೆ.<br /> <br /> ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನೆನಪಿಗಾಗಿ ಪ್ರಧಾನಿ ಸಿಂಗ್ ಸೇರಿದಂತೆ ವಿಶ್ವದ ಎಲ್ಲಾ ನಾಯಕರಿಗೆ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಸ್ಯಾಮ್ಸಂಗ್ ಕಂಪೆನಿಯ ಅತ್ಯಾಧುನಿಕ ಗ್ಯಾಲಕ್ಸಿ ಟ್ಯಾಬ್ಲೆಟ್ನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.<br /> <br /> ಟ್ಯಾಬ್ಲೆಟ್ನ ಹಿಂಭಾಗವು ಕೊರಿಯಾ ಭಾಷೆಯಲ್ಲಿ ನಜಿಯೊನ್ ಚಿಲ್ಗಿ ಎಂದು ಕರೆಯಲಾಗುವ ಮೆರುಗು ಹೊಂದಿರುವ ಕಪ್ಪೆಚಿಪ್ಪಿನ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿದೆ ಮತ್ತು ಆಯಾ ದೇಶದ ನಾಯಕರ ಹೆಸರನ್ನು ಹೊಂದಿದೆ. ಮತ್ತು ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕೊರಿಯಾಟೈಮ್ಸ.ಕೊ.ಕೆಆರ್ ವರದಿ ಮಾಡಿದೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಲ್ (ಪಿಟಿಐ): ಭಾರತದಲ್ಲಿ ಅಣು ಸ್ಥಾವರಗಳನ್ನು ಸ್ಥಾಪಿಸಲು ದಕ್ಷಿಣ ಕೊರಿಯಾ ಉತ್ಸುಕವಾಗಿರುವ ಬೆನ್ನಲ್ಲೇ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಅಣುಶಕ್ತಿ ವಿಸ್ತರಣಾ ಕಾರ್ಯಕ್ರಮಕ್ಕೆ ನೆರವು ನೀಡುವಂತೆ ಇಲ್ಲಿನ ಉದ್ಯಮಿಗಳನ್ನು ಕೋರಿದ್ದಾರೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣುಶಕ್ತಿ ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ.<br /> <br /> ಪರಮಾಣು ಭದ್ರತೆ ಸಮಾವೇಶಕ್ಕೆ ಆಗಮಿಸಿರುವ ಪ್ರಧಾನಿ ಸಿಂಗ್ ಅವರಿಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಾವಕಾಶ ನೀಡಲು ಕೋರಿದ್ದರು. <br /> <br /> `ನವೀಕರಿಸಬಹುದಾದ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ದ್ವಿಗುಣಗೊಳಿಸುವ ಗುರಿಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣು ಶಕ್ತಿಗಳ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು~ ಎಂದು ಅವರು ದ.ಕೊರಿಯಾದ ಅಗ್ರ ಉದ್ದಿಮೆಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ತಿಳಿಸಿದ್ದಾರೆ.<br /> <br /> `ಭಾರತದಲ್ಲಿ ಉದ್ಯಮ ವಿಸ್ತರಣೆಗೆ ಬಹಳಷ್ಟು ಅವಕಾಶಗಳಿವೆ. ಕೊರಿಯಾದವರು ಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ನಿಪುಣರು ಎಂಬುದನ್ನು ನಾನು ಬಲ್ಲೆ~ ಎಂದು ದಕ್ಷಿಣ ಕೊರಿಯಾದ ವಾಣಿಜ್ಯೋದ್ಯಮ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮನಮೋಹನ್ ಸಿಂಗ್ ಹೇಳಿದರು.<br /> <br /> ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳ ಎನ್ನುವುದನ್ನು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ, ಕೆಲವು ವರ್ಷಗಳಿಂದ ಭಾರತದ ಅಭಿವೃದ್ಧಿ ಸೂಚ್ಯಂಕವು ಶೇ 7ರಷ್ಟಿದೆ. ಇದನ್ನು ಶೇ 10ಕ್ಕೆ ಏರಿಸುವ ನಿಟ್ಟಿನಲ್ಲಿ ಕೆಲವು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದರು.<br /> <br /> ಒಡಿಶಾದಲ್ಲಿ ಸ್ಥಳೀಯರ ವಿರೋಧದಿಂದ ಸ್ಥಗಿತವಾಗಿರುವ ಪೋಸ್ಕೊ ಯೋಜನೆಯ ಪುನರ್ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮತ್ತೆ ಭರವಸೆ ನೀಡಿರುವ ಅವರು, ಭಾರತವನ್ನು ನಂಬಿ ಎಂದರು.<br /> <strong><br /> ಭೂರಿ ಭೋಜನ</strong><br /> (ಐಎಎನ್ಎಸ್ ವರದಿ): ಸಮಾವೇಶಕ್ಕೆ ಆಗಮಿಸಿರುವ ಗಣ್ಯರ ಆತಿಥ್ಯಕ್ಕೆ ಭೂರಿ ಭೋಜನವೇ ಕಾದಿದೆ. ಪಾಶ್ಚಿಮಾತ್ಯ ಮತ್ತು ಕೊರಿಯಾ ಶೈಲಿಯ ರಸದೌಣವನ್ನು ಅತಿಥೇಯ ದಕ್ಷಿಣ ಕೊರಿಯಾ ನೀಡಲಿದೆ. 58 ವಿವಿಧ ದೇಶಗಳಿಂದ ಈ ಸಮಾವೇಶಕ್ಕೆ ಗಣ್ಯರು ಆಗಮಿಸಿದ್ದು, ಭಾಷಾ ತೊಡಕು ನಿವಾರಿಸಲು ವಿವಿಧ ದೇಶಗಳಿಂದ 51 ಭಾಷಾಂತರಕಾರರು ಆಗಮಿಸಿದ್ದಾರೆ. ಹಿಂದಿ, ಇಂಗ್ಲಿಷ್, ಚೈನಿ, ಜಪಾನಿ ಸೇರಿದಂತೆ 18 ಭಾಷೆಗಳನ್ನು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲಿದ್ದಾರೆ.<br /> <br /> <strong>ಒಬಾಮ ಭೇಟಿ</strong><br /> ಪರಮಾಣು ಭದ್ರತಾ ಸಮಾವೇಶಕ್ಕೆ ಇಲ್ಲಿಗೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಔತಣಕೂಟದ ವೇಳೆ ಆಲಂಗಿ ಸಿಕೊಂಡು ಯೋಗಕ್ಷೇಮ ವಿಚಾರಿಸಿದರು.<br /> <br /> ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಮನಮೋಹನ್ ಸಿಂಗ್ ಕುಶಲ ವಿಚಾರಿಸಿದರು.</p>.<table align="center" border="2" cellpadding="1" cellspacing="1" width="450"> <tbody> <tr> <td><strong>ಟ್ಯಾಬ್ಲೆಟ್ ಉಡುಗೊರೆ <br /> </strong>ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ವದೇಶಕ್ಕೆ ಹಿಂದಿರುಗುವಾಗ, ಅಗತ್ಯಕ್ಕೆ ತಕ್ಕಂತೆ ಮರು ರೂಪಿಸಿದ ಮತ್ತು ಕೊರಿಯಾದ ವಿಶಿಷ್ಟ ಕಲೆಯಿಂದ ವಿನ್ಯಾಸಗೊಳಿಸಿದ ಸ್ಯಾಮ್ಸಂಗ್ ಕಂಪೆನಿಯ ಅತ್ಯಾಧುನಿಕ ಟ್ಯಾಬ್ಲೆಟ್ನ್ನು ಜೊತೆಯಲ್ಲಿ ತರಲಿದ್ದಾರೆ.<br /> <br /> ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನೆನಪಿಗಾಗಿ ಪ್ರಧಾನಿ ಸಿಂಗ್ ಸೇರಿದಂತೆ ವಿಶ್ವದ ಎಲ್ಲಾ ನಾಯಕರಿಗೆ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಸ್ಯಾಮ್ಸಂಗ್ ಕಂಪೆನಿಯ ಅತ್ಯಾಧುನಿಕ ಗ್ಯಾಲಕ್ಸಿ ಟ್ಯಾಬ್ಲೆಟ್ನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.<br /> <br /> ಟ್ಯಾಬ್ಲೆಟ್ನ ಹಿಂಭಾಗವು ಕೊರಿಯಾ ಭಾಷೆಯಲ್ಲಿ ನಜಿಯೊನ್ ಚಿಲ್ಗಿ ಎಂದು ಕರೆಯಲಾಗುವ ಮೆರುಗು ಹೊಂದಿರುವ ಕಪ್ಪೆಚಿಪ್ಪಿನ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿದೆ ಮತ್ತು ಆಯಾ ದೇಶದ ನಾಯಕರ ಹೆಸರನ್ನು ಹೊಂದಿದೆ. ಮತ್ತು ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕೊರಿಯಾಟೈಮ್ಸ.ಕೊ.ಕೆಆರ್ ವರದಿ ಮಾಡಿದೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>