<div class="field-items"><div class="field-item even"><p><strong>ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಅನ್ಯಾಯ: ತಿದ್ದುಪಡಿ ಅಗತ್ಯ</strong></p><div class="mt-xl-3 mb-xl-1" data-google-query-id="CKq724zRpOwCFYcYtwAduvMFRA" id="PV_Desktop_AP_Display_MR_S1_P2" yeti-found="true"><div id="google_ads_iframe_/1013527/pv_desktop_ap_display_mr_s1_p2_0__container__" style="border: 0pt none;"><strong>ಬೆಂಗಳೂರು, ಅ. 4– </strong>ಮೈಸೂರು ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಮಹದನ್ಯಾಯವಾಗಿದೆಯೆಂದು ಮೈಸೂರು ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಶ್ರೀ ಎಂ.ಆರ್. ನಾಗೇಶ್ವರ ಅಯ್ಯರ್ ಅವರು ಇಂದು ಇಲ್ಲಿ ನುಡಿದು, ನ್ಯಾಯ ದೊರಕಿಸಲು ಕಾನೂನಿನ ತಿದ್ದುಪಡಿ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.</div></div><p>ರೈತವಾದಿ ಭೂಮಾಲೀಕರಿಗೆ ಆಗಿರುವ ಅನ್ಯಾಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ಹಿಡುವಳಿಯ ಮಿತಿಗೊಳಪಟ್ಟ ಜಮೀನು ಮಾಲೀಕರು ಸ್ವಂತ ಸಾಗುವಳಿಗೆ ಜಮೀನು ಬಿಡಿಸಿಕೊಳ್ಳಲು ಹಾಗೂ ಬಾಕಿ ಬಿದ್ದಿರುವ ಗುತ್ತಿಗೆಯನ್ನು ಪೂರ್ಣವಾಗಿ ವಸೂಲು ಮಾಡಲು ಅವಕಾಶವಾಗುವಂತೆ ಶಾಸನವನ್ನು ಸರ್ಕಾರ ತಿದ್ದುಪಡಿ ಮಾಡಬೇಕೆಂದು ಒತ್ತಾಯ ಮಾಡಿದರು.</p><p><strong>ನಗರದಲ್ಲಿ ಮತ್ತೆ ಚಂದ್ರಶಿಲೆ</strong></p><p><strong>ಬೆಂಗಳೂರು, ಅ. 4 </strong>– ಚಂದ್ರಶಿಲೆ ಮತ್ತೊಮ್ಮೆ ನಗರಕ್ಕೆ ಬಂದಿದ್ದು, 3 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ದೊರೆಯಲಿದೆ.</p><p>ಅಪೊಲೊ– 11ರ ಗಗನಯಾತ್ರಿಗಳು ಚಂದ್ರನಿಂದ ತಂದ 350 ಗ್ರಾಂ ತೂಕದ ಶಿಲೆಯಿಂದ ಮಾಡಿರುವ ಈ ಚೂರಿನ ತೂಕ 28.5 ಗ್ರಾಂಗಳು.</p><p>ಭಾರತದಲ್ಲಿ ಎರಡನೆಯ ಪ್ರವಾಸ ಮಾಡುತ್ತಿರುವ ಈ ಶಿಲೆಯನ್ನು ಈಗಾಗಲೇ 5 ಲಕ್ಷಕ್ಕಿಂತ ಹೆಚ್ಚು ಮಂದಿ ನೋಡಿದ್ದಾರೆ.</p></div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div class="field-items"><div class="field-item even"><p><strong>ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಅನ್ಯಾಯ: ತಿದ್ದುಪಡಿ ಅಗತ್ಯ</strong></p><div class="mt-xl-3 mb-xl-1" data-google-query-id="CKq724zRpOwCFYcYtwAduvMFRA" id="PV_Desktop_AP_Display_MR_S1_P2" yeti-found="true"><div id="google_ads_iframe_/1013527/pv_desktop_ap_display_mr_s1_p2_0__container__" style="border: 0pt none;"><strong>ಬೆಂಗಳೂರು, ಅ. 4– </strong>ಮೈಸೂರು ಭೂಸುಧಾರಣೆ ಶಾಸನದಿಂದ ಸಣ್ಣ ಹಿಡುವಳಿದಾರರಿಗೆ ಮಹದನ್ಯಾಯವಾಗಿದೆಯೆಂದು ಮೈಸೂರು ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಶ್ರೀ ಎಂ.ಆರ್. ನಾಗೇಶ್ವರ ಅಯ್ಯರ್ ಅವರು ಇಂದು ಇಲ್ಲಿ ನುಡಿದು, ನ್ಯಾಯ ದೊರಕಿಸಲು ಕಾನೂನಿನ ತಿದ್ದುಪಡಿ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.</div></div><p>ರೈತವಾದಿ ಭೂಮಾಲೀಕರಿಗೆ ಆಗಿರುವ ಅನ್ಯಾಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ಹಿಡುವಳಿಯ ಮಿತಿಗೊಳಪಟ್ಟ ಜಮೀನು ಮಾಲೀಕರು ಸ್ವಂತ ಸಾಗುವಳಿಗೆ ಜಮೀನು ಬಿಡಿಸಿಕೊಳ್ಳಲು ಹಾಗೂ ಬಾಕಿ ಬಿದ್ದಿರುವ ಗುತ್ತಿಗೆಯನ್ನು ಪೂರ್ಣವಾಗಿ ವಸೂಲು ಮಾಡಲು ಅವಕಾಶವಾಗುವಂತೆ ಶಾಸನವನ್ನು ಸರ್ಕಾರ ತಿದ್ದುಪಡಿ ಮಾಡಬೇಕೆಂದು ಒತ್ತಾಯ ಮಾಡಿದರು.</p><p><strong>ನಗರದಲ್ಲಿ ಮತ್ತೆ ಚಂದ್ರಶಿಲೆ</strong></p><p><strong>ಬೆಂಗಳೂರು, ಅ. 4 </strong>– ಚಂದ್ರಶಿಲೆ ಮತ್ತೊಮ್ಮೆ ನಗರಕ್ಕೆ ಬಂದಿದ್ದು, 3 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ದೊರೆಯಲಿದೆ.</p><p>ಅಪೊಲೊ– 11ರ ಗಗನಯಾತ್ರಿಗಳು ಚಂದ್ರನಿಂದ ತಂದ 350 ಗ್ರಾಂ ತೂಕದ ಶಿಲೆಯಿಂದ ಮಾಡಿರುವ ಈ ಚೂರಿನ ತೂಕ 28.5 ಗ್ರಾಂಗಳು.</p><p>ಭಾರತದಲ್ಲಿ ಎರಡನೆಯ ಪ್ರವಾಸ ಮಾಡುತ್ತಿರುವ ಈ ಶಿಲೆಯನ್ನು ಈಗಾಗಲೇ 5 ಲಕ್ಷಕ್ಕಿಂತ ಹೆಚ್ಚು ಮಂದಿ ನೋಡಿದ್ದಾರೆ.</p></div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>