<p><strong>ಮೈಸೂರು: </strong>‘ರಂಗಕರ್ಮಿ ಮುದ್ದುಕೃಷ್ಣ, ಸಿಎಫ್ಟಿಆರ್ಐನ ವಿಜ್ಞಾನಿ ಡಾ.ಡಿ.ಇಂದ್ರಾಣಿ ದಂಪತಿಯ ಅಕಾಲಿಕ ಮರಣ ರಂಗಭೂಮಿ ಸೇರಿದಂತೆ ಸಿಎಫ್ಟಿಆರ್ಐ ಹಾಗೂ ಸಾಮಾಜಿಕ ವಲಯದಲ್ಲಿ ಶೂನ್ಯ ಭಾವ ನಿರ್ಮಿಸಿದೆ’ ಎಂದು ಆಪ್ತ ಒಡನಾಡಿಗಳು ಸ್ಮರಿಸಿದರು.</p>.<p>‘ಅಕಾಲಿಕ ಮರಣವಾದರೂ; ಸಹ ಮರಣ ಇಬ್ಬರ ನಡುವಿನ ಪ್ರೀತಿಯ ದ್ಯೋತಕ. ತುಂಬು ದಾಂಪತ್ಯ ಜೀವನದ ಪ್ರತೀಕ’ ಎಂದು ಗುರುವಾರ ಮುಸ್ಸಂಜೆ ನಗರದ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ನಡೆದ ‘ನುಡಿ ನಮನ’ ಸಮಾರಂಭದಲ್ಲಿ ರಂಗಕರ್ಮಿಗಳು ಆತ್ಮೀಯರಿಗೆ ನುಡಿ ನಮನ ಅರ್ಪಿಸಿದರು.</p>.<p>ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ಮಾತನಾಡಿ ಮುದ್ದುಕೃಷ್ಣ ಜತೆಗಿನ ಒಡನಾಟದ ನೆನಪಿನ ಬುತ್ತಿ ಬಿಚ್ಚಿಟ್ಟರು. ‘ಮುದ್ದುಕೃಷ್ಣ ನಮ್ಮ ಸಾಮಾಜಿಕ ಸಂಸಾರದ ಹಿರಿಯ. ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು ಎದುರಾದಾಗಲೆಲ್ಲಾ ಆಳವಾಗಿ ಯೋಚಿಸುವ ಜತೆಯಲ್ಲೇ ಅದಕ್ಕೆ ನೇರವಾಗಿ ಮುಖಾಮುಖಿಯಾಗುತ್ತಿದ್ದ’ ಎಂದು ನೆನಪಿಸಿಕೊಂಡರು.</p>.<p>‘ಎಲ್ಲರೂ ಒಂದೇ. ಪ್ರತಿಯೊಬ್ಬರಿಗೂ ಸಾಮಾಜಿಕ ಘನತೆಯಿದೆ. ಆ ಘನತೆಗೆ ಧಕ್ಕೆ ಬಾರದಂತೆ ಸರ್ವರೂ ನಡೆದುಕೊಳ್ಳಬೇಕು ಎಂದವರು ಮುದ್ದುಕೃಷ್ಣ. ಇವರ ಪತ್ನಿ ಇಂದ್ರಾಣಿ ನಾಚಿಕೆ ಸ್ವಭಾವದವರು. ಎಲ್ಲರನ್ನೂ ಪ್ರೀತಿಯಿಂದ ಗೌರವಯುತವಾಗಿ ಕಂಡವರು. ಮುದ್ದುಕೃಷ್ಣನ ಬೆಳವಣಿಗೆಗೆ ಹೆಗಲಿಗೆ ಹೆಗಲು ಕೊಟ್ಟವರು. ದಂಪತಿ ಒಬ್ಬರಿಗೊಬ್ಬರು ಪೂರಕವಾಗಿ ಬದುಕು ನಡೆಸಿದವರು’ ಎಂದು ಹೇಳಿದರು.</p>.<p>ರಂಗಕರ್ಮಿ ಎಚ್.ಎಸ್.ಉಮೇಶ್ ಮಾತನಾಡಿ ‘ಮುದ್ದುಕೃಷ್ಣ ಕಪಿಲಾ ಎಂ.ಕೃಷ್ಣ ಆಗಿದ್ದವರು. ಸದಾ ಹಸನ್ಮುಖಿ. ತಮಾಷೆ ಮಾಡುತ್ತಿದ್ದರು. ಅತ್ಯಾಪ್ತರಿಗೆ ಮಾತ್ರ ಅವರ ಬದುಕಿನ ಆರಂಭದ ದಿನಗಳ ದುಃಖದ ಮುಖ ಗೊತ್ತಿತ್ತು. ನಮ್ಮೆದುರು ಗಳಗಳನೆ ಅತ್ತಿರುವುದು ಉಂಟು’ ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.</p>.<p>‘ಬಡವರ ನೋವು ಅರಿತಿದ್ದರು. ಎಲ್ಲವನ್ನೂ ತನ್ನ ಮೈಮೇಲೆ ಹಾಕಿಕೊಳ್ಳುವ ಸ್ವಭಾವ ಅವರದ್ದಾಗಿತ್ತು. ಹಲ ಖ್ಯಾತನಾಮರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಮುದ್ದುಕೃಷ್ಣ ಅವರಿಗೆ ಸಲ್ಲುತ್ತದೆ. ಸಂಗೀತದ ಸೂಕ್ಷ್ಮ ಪ್ರಜ್ಞೆ ಇಲ್ಲದಿದ್ದರೂ; ಸಂಗೀತವನ್ನು ಪ್ರೀತಿಸಿದರು. ಯಾರೊಬ್ಬರ ಶಿಷ್ಯತ್ವ ಪಡೆದವರಲ್ಲ. ಯಾರಿಗೂ ಕೇಡು ಬಯಸದವ. ಬದುಕಿನ ಎಲ್ಲ ಆಯಾಮ, ಕ್ಷೇತ್ರಗಳಲ್ಲೂ ಪ್ರೀತಿಯಿಂದ ತೊಡಗಿಸಿಕೊಂಡವರು. ಎಲ್ಲರನ್ನೂ ಪ್ರೀತಿಸಿದವರು’ ಎಂದು ಉಮೇಶ್ ಒಡನಾಡಿಯ ಅಂತರಂಗವನ್ನು ನುಡಿನಮನದಲ್ಲಿ ಬಿಚ್ಚಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ರಂಗಕರ್ಮಿ ಮುದ್ದುಕೃಷ್ಣ, ಸಿಎಫ್ಟಿಆರ್ಐನ ವಿಜ್ಞಾನಿ ಡಾ.ಡಿ.ಇಂದ್ರಾಣಿ ದಂಪತಿಯ ಅಕಾಲಿಕ ಮರಣ ರಂಗಭೂಮಿ ಸೇರಿದಂತೆ ಸಿಎಫ್ಟಿಆರ್ಐ ಹಾಗೂ ಸಾಮಾಜಿಕ ವಲಯದಲ್ಲಿ ಶೂನ್ಯ ಭಾವ ನಿರ್ಮಿಸಿದೆ’ ಎಂದು ಆಪ್ತ ಒಡನಾಡಿಗಳು ಸ್ಮರಿಸಿದರು.</p>.<p>‘ಅಕಾಲಿಕ ಮರಣವಾದರೂ; ಸಹ ಮರಣ ಇಬ್ಬರ ನಡುವಿನ ಪ್ರೀತಿಯ ದ್ಯೋತಕ. ತುಂಬು ದಾಂಪತ್ಯ ಜೀವನದ ಪ್ರತೀಕ’ ಎಂದು ಗುರುವಾರ ಮುಸ್ಸಂಜೆ ನಗರದ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ನಡೆದ ‘ನುಡಿ ನಮನ’ ಸಮಾರಂಭದಲ್ಲಿ ರಂಗಕರ್ಮಿಗಳು ಆತ್ಮೀಯರಿಗೆ ನುಡಿ ನಮನ ಅರ್ಪಿಸಿದರು.</p>.<p>ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ಮಾತನಾಡಿ ಮುದ್ದುಕೃಷ್ಣ ಜತೆಗಿನ ಒಡನಾಟದ ನೆನಪಿನ ಬುತ್ತಿ ಬಿಚ್ಚಿಟ್ಟರು. ‘ಮುದ್ದುಕೃಷ್ಣ ನಮ್ಮ ಸಾಮಾಜಿಕ ಸಂಸಾರದ ಹಿರಿಯ. ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು ಎದುರಾದಾಗಲೆಲ್ಲಾ ಆಳವಾಗಿ ಯೋಚಿಸುವ ಜತೆಯಲ್ಲೇ ಅದಕ್ಕೆ ನೇರವಾಗಿ ಮುಖಾಮುಖಿಯಾಗುತ್ತಿದ್ದ’ ಎಂದು ನೆನಪಿಸಿಕೊಂಡರು.</p>.<p>‘ಎಲ್ಲರೂ ಒಂದೇ. ಪ್ರತಿಯೊಬ್ಬರಿಗೂ ಸಾಮಾಜಿಕ ಘನತೆಯಿದೆ. ಆ ಘನತೆಗೆ ಧಕ್ಕೆ ಬಾರದಂತೆ ಸರ್ವರೂ ನಡೆದುಕೊಳ್ಳಬೇಕು ಎಂದವರು ಮುದ್ದುಕೃಷ್ಣ. ಇವರ ಪತ್ನಿ ಇಂದ್ರಾಣಿ ನಾಚಿಕೆ ಸ್ವಭಾವದವರು. ಎಲ್ಲರನ್ನೂ ಪ್ರೀತಿಯಿಂದ ಗೌರವಯುತವಾಗಿ ಕಂಡವರು. ಮುದ್ದುಕೃಷ್ಣನ ಬೆಳವಣಿಗೆಗೆ ಹೆಗಲಿಗೆ ಹೆಗಲು ಕೊಟ್ಟವರು. ದಂಪತಿ ಒಬ್ಬರಿಗೊಬ್ಬರು ಪೂರಕವಾಗಿ ಬದುಕು ನಡೆಸಿದವರು’ ಎಂದು ಹೇಳಿದರು.</p>.<p>ರಂಗಕರ್ಮಿ ಎಚ್.ಎಸ್.ಉಮೇಶ್ ಮಾತನಾಡಿ ‘ಮುದ್ದುಕೃಷ್ಣ ಕಪಿಲಾ ಎಂ.ಕೃಷ್ಣ ಆಗಿದ್ದವರು. ಸದಾ ಹಸನ್ಮುಖಿ. ತಮಾಷೆ ಮಾಡುತ್ತಿದ್ದರು. ಅತ್ಯಾಪ್ತರಿಗೆ ಮಾತ್ರ ಅವರ ಬದುಕಿನ ಆರಂಭದ ದಿನಗಳ ದುಃಖದ ಮುಖ ಗೊತ್ತಿತ್ತು. ನಮ್ಮೆದುರು ಗಳಗಳನೆ ಅತ್ತಿರುವುದು ಉಂಟು’ ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.</p>.<p>‘ಬಡವರ ನೋವು ಅರಿತಿದ್ದರು. ಎಲ್ಲವನ್ನೂ ತನ್ನ ಮೈಮೇಲೆ ಹಾಕಿಕೊಳ್ಳುವ ಸ್ವಭಾವ ಅವರದ್ದಾಗಿತ್ತು. ಹಲ ಖ್ಯಾತನಾಮರನ್ನು ರಂಗಭೂಮಿಗೆ ಪರಿಚಯಿಸಿದ ಕೀರ್ತಿ ಮುದ್ದುಕೃಷ್ಣ ಅವರಿಗೆ ಸಲ್ಲುತ್ತದೆ. ಸಂಗೀತದ ಸೂಕ್ಷ್ಮ ಪ್ರಜ್ಞೆ ಇಲ್ಲದಿದ್ದರೂ; ಸಂಗೀತವನ್ನು ಪ್ರೀತಿಸಿದರು. ಯಾರೊಬ್ಬರ ಶಿಷ್ಯತ್ವ ಪಡೆದವರಲ್ಲ. ಯಾರಿಗೂ ಕೇಡು ಬಯಸದವ. ಬದುಕಿನ ಎಲ್ಲ ಆಯಾಮ, ಕ್ಷೇತ್ರಗಳಲ್ಲೂ ಪ್ರೀತಿಯಿಂದ ತೊಡಗಿಸಿಕೊಂಡವರು. ಎಲ್ಲರನ್ನೂ ಪ್ರೀತಿಸಿದವರು’ ಎಂದು ಉಮೇಶ್ ಒಡನಾಡಿಯ ಅಂತರಂಗವನ್ನು ನುಡಿನಮನದಲ್ಲಿ ಬಿಚ್ಚಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>