ಎಂಬತ್ತರ ಪ್ರಾಯದಲ್ಲೂ ತ್ರಾಣ, ತಾಳ್ಮೆ ತಮ್ಮಂದಿಗೆ ಸಹಕರಿಸುತ್ತಿಲ್ಲವೆಂದು ವಿಷಾದಿಸಿದ, `ಸಂಶೋಧಕನಾಗಿ ನಾನೊಬ್ಬ ಪಥಿಕ'ನೆಂದು ವಿನಯಪೂರ್ವಕ ನಿವೇದಿಸಿಕೊಳ್ಳುವುದು ಶಾಸ್ತ್ರಿಗಳ ಪಾಂಡಿತ್ಯದ ಪ್ರತೀಕ. ಸಂಶೋಧಕನ ಮನೋಧರ್ಮ, ಸಂಶೋಧನೆಯ ಸ್ವರೂಪ, ಆತನ ಪಾಂಡಿತ್ಯ, ವಿಷಯ ವೈವಿಧ್ಯತೆಗಳ ಕುರಿತು ಬರೆದ ಅವರ ಕೃತಿಗಳು ಯುವ ಭಾಷಾ ವಿದ್ವಾಂಸರಿಗೆ ದಾರಿದೀಪಗಳಾಗಬಲ್ಲವು.
-ಮೋಹನ್. ರು. ಹಣಗಿ, ಅಮೀನಗಡ.