ಸಂಚಾಲಕಿ ನವೀದಾ ಹುಸೇನ್ ಮಾತನಾಡಿ, ‘ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಗುಲ್ಶನ್ ಸಂಘಟನೆ ಮಕ್ಕಳು ಈ ರೀತಿ ಅಭಿಯಾನ ಆಯೋಜಿಸುತ್ತಾ ಬಂದಿ ದ್ದಾರೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಆರಂಭವಾಗಿದ್ದು, ಅದ ಕ್ಕಾಗಿ ನೀರು ಉಳಿಸಿ ಎನ್ನುವ ಅಭಿಯಾನ ಆರಂಭಿಸ ಲಾಗಿದೆ. ನೀರು ಸಂರಕ್ಷಣೆ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಕ್ಕಳು ನಗರ ವ್ಯಾಪ್ತಿ ಮನೆ ಮನೆಗಳಿಗೆ ಭೇಟಿ ನೀಡಿ, ನೀರು ಸಂರ ಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 200 ಮಕ್ಕಳು ಪಾಲ್ಗೊಂಡಿದ್ದು, 8ರಿಂದ15 ವರ್ಷದೊ ಳಗಿನ 130 ಮಕ್ಕಳು ಈ ಮಾನವ ಸರಪಳಿ ಅಭಿ ಯಾನದಲ್ಲಿ ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.