ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಕ್ಯಾಂಟೀನ್ ಬಾಗಿಲಿಗೆ ಕಟ್ಟಿದ್ದ ರಿಬ್ಬನ್ ಕತ್ತರಿಸಲುಹರಸಾಹಸ ಪಡುತ್ತಿದ್ದರು. ಮನಗೂಳಿ ಹಿಂಬದಿಯೇ ಇದ್ದ ಗೋಪಾಲ ಘಟಕಾಂಬಳೆ ರಿಬ್ಬನ್ ಹಿಡಿದು, ಸಚಿವರಿಗೆ ಸಹಕಾರ ನೀಡಲು ಮುಂದಾದರು. ಇವರಿರಿಬ್ಬರ ಹಿಂದೆ ನಿಂತಿದ್ದ ಶಾಸಕ ಬಸನಗೌಡ ಪಾಟೀಲರು ತಕ್ಷಣವೇ, ‘ಕಾಮನ್ಸೆನ್ಸ್ ಇಲ್ಲದವರಿಗೆ ಅಧಿಕಾರ ಸಿಕ್ಕರೆ ಹೀಗೆ ಆಗೋದು. ಸಚಿ
ವರ ಜತೆ ಮೇಯರ್ ಇರಬೇಕಲ್ವಾ’ ಎಂದು ಘಟಕಾಂಬಳೆಯನ್ನು ಛೇಡಿಸಿದರು. ಗೌಡರ ಬೆಂಬಲಿಗರು ಜೋರಾಗಿನಗುವ ಮೂಲಕ ಶಾಸಕರನ್ನು ಬೆಂಬಲಿಸಿದರು.