ಎರಡು ಕಡೆ 36 ತಾಸು ಕರ್ಫ್ಯೂ: ಅಲ್ಲಲ್ಲಿ ಹಿಂಸೆ– ಇನ್ನೂ ಇಬ್ಬರು ಇರಿತಕ್ಕೆ ಬಲಿ
ಬೆಂಗಳೂರು, ಅ. 10– ಉರ್ದು ವಾರ್ತೆ ವಿರೋಧಿಸಿ ಆರಂಭವಾದ ಹಿಂಸಾಚಾರ ನಾಲ್ಕನೇ ದಿನವಾದ ಇಂದೂ ಕೆಲವು ಪ್ರದೇಶಗಳಲ್ಲಿ ಮುಂದುವರಿದಿದ್ದು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಮತ್ತೆ ಮರುಕಳಿಸಿದ ಬೆಂಕಿ ಹಚ್ಚುವಿಕೆ ಹಾಗೂ ಇರಿತದ ಪ್ರಕರಣಗಳಲ್ಲಿ ಇಬ್ಬರು ಅಸುನೀಗಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 25ಕ್ಕೆ ಏರಿದೆ.