ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 21–6–1994

Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ಚವಾಣ್ ಜತೆ ಸಿಕ್ಕಿಂ ರಾಜ್ಯಪಾಲರ ಚರ್ಚೆ
ನವದೆಹಲಿ, ಜೂನ್ 20 (ಯುಎನ್‌ಐ, ಪಿಟಿಐ)–
ಸಿಕ್ಕಿಂನ ರಾಜ್ಯಪಾಲ ಅಡ್ಮಿರಲ್ ಆರ್.ಎಚ್. ತಹಿಲಿಯಾನಿ ಅವರು ಇಂದು ಗೃಹ ಸಚಿವ ಎಸ್.ಬಿ. ಚವಾಣ್ ಅವರನ್ನು ಭೇಟಿಯಾಗಿ, ಮಾಜಿ ಮುಖ್ಯಮಂತ್ರಿ ನರಬಹಾದೂರ್ ಭಂಡಾರಿ ಅವರೂ ಸೇರಿದಂತೆ 17 ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಆದರೆ ಈ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವುದು ಹೆಚ್ಚುಕಡಿಮೆ ಖಚಿತವಾಗಿದೆ.

ಮಸೀದಿಯಲ್ಲಿ ಸ್ಫೋಟ: 100 ಸಾವು
ಲಂಡನ್, ಜೂನ್ 20 (ಡಿಪಿಎ)–
ಇರಾನಿನ ಈಶಾನ್ಯ ಭಾಗದ ನಗರ ಮಷ್‌ಹಾದ್‌ನಲ್ಲಿರುವ ಶಿಯಾ ಸಮುದಾಯದ ಮಸೀದಿಯಲ್ಲಿ ಇಂದು ಭಾರಿ ಬಾಂಬ್ ಸ್ಫೋಟಿಸಿದ್ದರಿಂದ 100ಕ್ಕೂ ಹೆಚ್ಚು ಜನ ಸತ್ತರು.

ಮದುವೆ ಊಟ ಉಂಡು 7 ಮಂದಿ ಮಸಣಕ್ಕೆ
‌ಮೈಸೂರು, ಜೂನ್ 20–
ಮದುವೆ ಊಟ ಮಾಡಿ ಅಸ್ವಸ್ಥರಾಗಿದ್ದ ಹಲವಾರು ಮಂದಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟ ದಾರುಣ ಘಟನೆ ನಂಜನಗೂಡು ತಾಲ್ಲೂಕಿನ ಕೊಣನೂರು ಮತ್ತು ಹೆಜ್ಜಿಗೆಯಿಂದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT