ಚವಾಣ್ ಜತೆ ಸಿಕ್ಕಿಂ ರಾಜ್ಯಪಾಲರ ಚರ್ಚೆ
ನವದೆಹಲಿ, ಜೂನ್ 20 (ಯುಎನ್ಐ, ಪಿಟಿಐ)– ಸಿಕ್ಕಿಂನ ರಾಜ್ಯಪಾಲ ಅಡ್ಮಿರಲ್ ಆರ್.ಎಚ್. ತಹಿಲಿಯಾನಿ ಅವರು ಇಂದು ಗೃಹ ಸಚಿವ ಎಸ್.ಬಿ. ಚವಾಣ್ ಅವರನ್ನು ಭೇಟಿಯಾಗಿ, ಮಾಜಿ ಮುಖ್ಯಮಂತ್ರಿ ನರಬಹಾದೂರ್ ಭಂಡಾರಿ ಅವರೂ ಸೇರಿದಂತೆ 17 ಶಾಸಕರು ವಿಧಾನಸಭೆಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಆದರೆ ಈ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುವುದು ಹೆಚ್ಚುಕಡಿಮೆ ಖಚಿತವಾಗಿದೆ.