<p><strong>ಅರ್ಜುನ್ ಸಿಂಗ್ ರಾಜೀನಾಮೆ?</strong><br /><strong>ನವದೆಹಲಿ, ಡಿ. 21 (ಪಿಟಿಐ)–</strong> ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ರಾಜಧಾನಿಯಲ್ಲಿ ಇಂದು ದಟ್ಟವಾಗಿ ಹಬ್ಬಿದೆ. ಕಾಂಗೈ ವಲಯದಲ್ಲಿ ಈ ಬಗ್ಗೆ ಯಾರೂ ತುಟಿಪಿಟಕ್ ಎನ್ನುತ್ತಿಲ್ಲವಾದರೂ ತೆರೆಮರೆಯಲ್ಲಿ ತೀವ್ರ ಮತ್ತು ಕುತೂಹಲಕಾರಿ ರಾಜಕೀಯ ವಿದ್ಯಮಾನಗಳು ನಡೆಯುತ್ತಿದೆ.</p>.<p>ರಾವ್ ಸಂಪುಟದ ಹಿರಿಯ ಸಚಿವರಾದ ಅರ್ಜುನ್ ಸಿಂಗ್ ಅವರನ್ನು ಉತ್ತರ ಪ್ರದೇಶ ಪಿಪಿಸಿ ಅಧ್ಯಕ್ಷ ಎನ್.ಡಿ. ತಿವಾರಿ ಮತ್ತು ಮಹಾರಾಷ್ಟ್ರಮುಖ್ಯಮಂತ್ರಿ ಶರದ್ ಪವಾರ್ ಭೇಟಿ ಮಾಡಿದ್ದರು. ಬೆಂಬಲಿಗರಿಂದ ತುಂಬಿರುವ ಈ ಮೂವರ ಮನೆಗಳು ಈಗ ಬಿರುಸಿನ ಚಟುವಟಿಕೆಯ ಕೇಂದ್ರವಾಗಿವೆ. ಇವರೆಲ್ಲ ಪಕ್ಷದ ವಿದ್ಯಮಾನಗಳ ಬಗ್ಗೆ ತೀವ್ರ ಅಸಮಾಧಾನಗೊಂಡವರು ಎಂಬುದು ಗಮನಾರ್ಹ.</p>.<p><strong>ಅರೆಪ್ರಜ್ಞಾವಸ್ಥೆಯಲ್ಲಿ ಪಂಡರೀಬಾಯಿ</strong><br /><strong>ಬೆಂಗಳೂರು, ಡಿ. 21–</strong> ಭಾನುವಾರ ಬೆಳಗಿನ ಜಾವ ಸಂಭವಿಸಿದ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ಖ್ಯಾತ ನಟಿ ಪಂಡರೀಬಾಯಿ ಇನ್ನೂ ಅರೆಪ್ರಜ್ಞಾವಸ್ಥೆಯಲ್ಲೇ ಇದ್ದಾರೆ. ಅವರ ಎಡ ಮೊಣಕೈಯನ್ನು ಕತ್ತರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾರೆ.</p>.<p><strong>‘ಅನ್ಯಾಯ ನಿಲ್ಲದಿದ್ದರೆ ಪ್ರತ್ಯೇಕ ರಾಜ್ಯ ಚಳವಳಿ’</strong><br /><strong>ಬೆಂಗಳೂರು, ಡಿ. 21–</strong> ಹೈದರಾಬಾದ್–ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ‘ಪ್ರತ್ಯೇಕ ರಾಜ್ಯ ಬೇಡಿಕೆ’ ಚಳವಳಿಯನ್ನು ಹಮ್ಮಿಕೊಳ್ಳಬೇಕಾದೀತು ಎಂದು ಹೈದರಾಬಾದ್–ಕರ್ನಾಟಕ ಯುವ ಸಂಘರ್ಷ ಸಮಿತಿ ಮತ್ತು ವಿಜಾಪುರ ಜಿಲ್ಲಾ ಸಂಘರ್ಷ ಸಮಿತಿಗಳ ಸಮನ್ವಯ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ಕಳೆದ ಏಳೆಂಟು ವರ್ಷಗಳಿಂದ ಈ ಭಾಗದ ಐದು ಜಿಲ್ಲೆಗಳನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಲಕ್ಷ್ಮಣ ದಸ್ತಿ, ವಕ್ತಾರ ಡಿ.ವಿ. ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರ್ಜುನ್ ಸಿಂಗ್ ರಾಜೀನಾಮೆ?</strong><br /><strong>ನವದೆಹಲಿ, ಡಿ. 21 (ಪಿಟಿಐ)–</strong> ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ರಾಜಧಾನಿಯಲ್ಲಿ ಇಂದು ದಟ್ಟವಾಗಿ ಹಬ್ಬಿದೆ. ಕಾಂಗೈ ವಲಯದಲ್ಲಿ ಈ ಬಗ್ಗೆ ಯಾರೂ ತುಟಿಪಿಟಕ್ ಎನ್ನುತ್ತಿಲ್ಲವಾದರೂ ತೆರೆಮರೆಯಲ್ಲಿ ತೀವ್ರ ಮತ್ತು ಕುತೂಹಲಕಾರಿ ರಾಜಕೀಯ ವಿದ್ಯಮಾನಗಳು ನಡೆಯುತ್ತಿದೆ.</p>.<p>ರಾವ್ ಸಂಪುಟದ ಹಿರಿಯ ಸಚಿವರಾದ ಅರ್ಜುನ್ ಸಿಂಗ್ ಅವರನ್ನು ಉತ್ತರ ಪ್ರದೇಶ ಪಿಪಿಸಿ ಅಧ್ಯಕ್ಷ ಎನ್.ಡಿ. ತಿವಾರಿ ಮತ್ತು ಮಹಾರಾಷ್ಟ್ರಮುಖ್ಯಮಂತ್ರಿ ಶರದ್ ಪವಾರ್ ಭೇಟಿ ಮಾಡಿದ್ದರು. ಬೆಂಬಲಿಗರಿಂದ ತುಂಬಿರುವ ಈ ಮೂವರ ಮನೆಗಳು ಈಗ ಬಿರುಸಿನ ಚಟುವಟಿಕೆಯ ಕೇಂದ್ರವಾಗಿವೆ. ಇವರೆಲ್ಲ ಪಕ್ಷದ ವಿದ್ಯಮಾನಗಳ ಬಗ್ಗೆ ತೀವ್ರ ಅಸಮಾಧಾನಗೊಂಡವರು ಎಂಬುದು ಗಮನಾರ್ಹ.</p>.<p><strong>ಅರೆಪ್ರಜ್ಞಾವಸ್ಥೆಯಲ್ಲಿ ಪಂಡರೀಬಾಯಿ</strong><br /><strong>ಬೆಂಗಳೂರು, ಡಿ. 21–</strong> ಭಾನುವಾರ ಬೆಳಗಿನ ಜಾವ ಸಂಭವಿಸಿದ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ಖ್ಯಾತ ನಟಿ ಪಂಡರೀಬಾಯಿ ಇನ್ನೂ ಅರೆಪ್ರಜ್ಞಾವಸ್ಥೆಯಲ್ಲೇ ಇದ್ದಾರೆ. ಅವರ ಎಡ ಮೊಣಕೈಯನ್ನು ಕತ್ತರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾರೆ.</p>.<p><strong>‘ಅನ್ಯಾಯ ನಿಲ್ಲದಿದ್ದರೆ ಪ್ರತ್ಯೇಕ ರಾಜ್ಯ ಚಳವಳಿ’</strong><br /><strong>ಬೆಂಗಳೂರು, ಡಿ. 21–</strong> ಹೈದರಾಬಾದ್–ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ‘ಪ್ರತ್ಯೇಕ ರಾಜ್ಯ ಬೇಡಿಕೆ’ ಚಳವಳಿಯನ್ನು ಹಮ್ಮಿಕೊಳ್ಳಬೇಕಾದೀತು ಎಂದು ಹೈದರಾಬಾದ್–ಕರ್ನಾಟಕ ಯುವ ಸಂಘರ್ಷ ಸಮಿತಿ ಮತ್ತು ವಿಜಾಪುರ ಜಿಲ್ಲಾ ಸಂಘರ್ಷ ಸಮಿತಿಗಳ ಸಮನ್ವಯ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ಕಳೆದ ಏಳೆಂಟು ವರ್ಷಗಳಿಂದ ಈ ಭಾಗದ ಐದು ಜಿಲ್ಲೆಗಳನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಲಕ್ಷ್ಮಣ ದಸ್ತಿ, ವಕ್ತಾರ ಡಿ.ವಿ. ಪಾಟೀಲ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>