ಸೇಲಂ, ಸೆ. 17 (ಯುಎನ್ಐ)– ಪೆರಿಯಾರ್ ಜಿಲ್ಲೆಯ ಹಾಸನೂರ್ ಅರಣ್ಯದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ ತಂಡ ಹಾಗೂ ಗಡಿ ಭದ್ರತಾ ಪಡೆ ಹಾಗೂ ಕರ್ನಾಟಕ, ತಮಿಳುನಾಡು ವಿಶೇಷ ಕಾರ್ಯಪಡೆಯ ಮಧ್ಯೆ ಇಂದು ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಬಿಎಸ್ಎಫ್ನ ಒಬ್ಬ ಯೋಧ ಹಾಗೂ ತಮಿಳುನಾಡು ವಿಶೇಷ ಕಾರ್ಯಪಡೆ ಮತ್ತು ವಿಶೇಷ ಭದ್ರತಾ ತಂಡದ ಇಬ್ಬರು ಸೈನಿಕರು ಮೃತಪಟ್ಟರು. ಐವರು ಸೈನಿಕರು ಗಾಯಗೊಂಡರು.