<p><strong>ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆ ಬಹುತೇಕ ಸಫಲ</strong><br /><strong>ಬೆಂಗಳೂರು, ಏ. 26–</strong> ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಬಹುತೇಕ ಸಫಲತೆ ಸಾಧಿಸಲಾಗಿದೆ. ಈ ಚಟುವಟಿಕೆಗೆ ಪೂರ್ಣವಿರಾಮ ಹಾಕುವ ದಿಕ್ಕಿನಲ್ಲಿ ಈಗಿರುವ ಎಂಟರ ಜತೆಗೆ ಇನ್ನೂ ಹತ್ತು ಚೆಕ್ಪೋಸ್ಟ್ ತೆರೆಯಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಡಿ.ಜಯರಾಂ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p>ಗ್ರಾನೈಟ್ ಗಣಿಗಾರಿಕೆ ವ್ಯವಹಾರ ಈವರೆಗೆ ಸುಮಾರು ಶೇಕಡ 75ರಷ್ಟು ಅಕ್ರಮವಾಗಿಯೇ ನಡೆಯುತ್ತಿತ್ತು. ಹೊಸ ಸರ್ಕಾರ ಬಂದ ನಂತರ ಈ ಅಕ್ರಮ ಚಟುವಟಿಕೆಯನ್ನು ಮುಕ್ಕಾಲು ಪಾಲು ತಗ್ಗಿಸಿದೆ. 20 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಗ್ರಾನೈಟ್ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವ್ಯವಹಾರಕ್ಕೆ ಇನ್ನು ಮುಂದೆ ಅವಕಾಶ ಕೊಡುವುದಿಲ್ಲ ಎಂದು ಅವರು ನುಡಿದರು.</p>.<p><strong>ನ್ಯೂಸ್ಪ್ರಿಂಟ್ ಮುಕ್ತ ಆಮದಿಗೆ ಅನುಮತಿ</strong><br /><strong>ನವದೆಹಲಿ, ಏ. 26 (ಪಿಟಿಐ)–</strong> ವೃತ್ತಪತ್ರಿಕಾ ಮುದ್ರಣ ಕಾಗದವನ್ನು (ನ್ಯೂಸ್ಪ್ರಿಂಟ್) ಸರ್ಕಾರ ಇಂದು ಹತೋಟಿಯಿಂದ ಮುಕ್ತಗೊಳಿಸಿ ವೃತ್ತಪತ್ರಿಕೆಗಳು ತಾವೇ ಈ ವಸ್ತುವನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕಾರಣ, ಗುರುವಾರ ನಡೆಸಲು ಉದ್ದೇಶಿಸಿದ್ದ ‘ಪತ್ರಿಕೆ ಬಂದ್’ ಮುಷ್ಕರವನ್ನು ಪತ್ರಿಕಾರಂಗ ವಾಪಸು ತೆಗೆದುಕೊಂಡಿತು.</p>.<p>ನ್ಯೂಸ್ಪ್ರಿಂಟ್ ಅನ್ನು ಮುಕ್ತ ಸಾಮಾನ್ಯ ಪರವಾನಗಿಯಲ್ಲಿ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ಇಂದು ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆ ಬಹುತೇಕ ಸಫಲ</strong><br /><strong>ಬೆಂಗಳೂರು, ಏ. 26–</strong> ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಬಹುತೇಕ ಸಫಲತೆ ಸಾಧಿಸಲಾಗಿದೆ. ಈ ಚಟುವಟಿಕೆಗೆ ಪೂರ್ಣವಿರಾಮ ಹಾಕುವ ದಿಕ್ಕಿನಲ್ಲಿ ಈಗಿರುವ ಎಂಟರ ಜತೆಗೆ ಇನ್ನೂ ಹತ್ತು ಚೆಕ್ಪೋಸ್ಟ್ ತೆರೆಯಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಡಿ.ಜಯರಾಂ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p>ಗ್ರಾನೈಟ್ ಗಣಿಗಾರಿಕೆ ವ್ಯವಹಾರ ಈವರೆಗೆ ಸುಮಾರು ಶೇಕಡ 75ರಷ್ಟು ಅಕ್ರಮವಾಗಿಯೇ ನಡೆಯುತ್ತಿತ್ತು. ಹೊಸ ಸರ್ಕಾರ ಬಂದ ನಂತರ ಈ ಅಕ್ರಮ ಚಟುವಟಿಕೆಯನ್ನು ಮುಕ್ಕಾಲು ಪಾಲು ತಗ್ಗಿಸಿದೆ. 20 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಗ್ರಾನೈಟ್ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವ್ಯವಹಾರಕ್ಕೆ ಇನ್ನು ಮುಂದೆ ಅವಕಾಶ ಕೊಡುವುದಿಲ್ಲ ಎಂದು ಅವರು ನುಡಿದರು.</p>.<p><strong>ನ್ಯೂಸ್ಪ್ರಿಂಟ್ ಮುಕ್ತ ಆಮದಿಗೆ ಅನುಮತಿ</strong><br /><strong>ನವದೆಹಲಿ, ಏ. 26 (ಪಿಟಿಐ)–</strong> ವೃತ್ತಪತ್ರಿಕಾ ಮುದ್ರಣ ಕಾಗದವನ್ನು (ನ್ಯೂಸ್ಪ್ರಿಂಟ್) ಸರ್ಕಾರ ಇಂದು ಹತೋಟಿಯಿಂದ ಮುಕ್ತಗೊಳಿಸಿ ವೃತ್ತಪತ್ರಿಕೆಗಳು ತಾವೇ ಈ ವಸ್ತುವನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕಾರಣ, ಗುರುವಾರ ನಡೆಸಲು ಉದ್ದೇಶಿಸಿದ್ದ ‘ಪತ್ರಿಕೆ ಬಂದ್’ ಮುಷ್ಕರವನ್ನು ಪತ್ರಿಕಾರಂಗ ವಾಪಸು ತೆಗೆದುಕೊಂಡಿತು.</p>.<p>ನ್ಯೂಸ್ಪ್ರಿಂಟ್ ಅನ್ನು ಮುಕ್ತ ಸಾಮಾನ್ಯ ಪರವಾನಗಿಯಲ್ಲಿ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ಇಂದು ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>