ಮನೆ ಮಾಲೀಕರಿಗೆ ಸ್ವಾತಂತ್ರ್ಯ
ಬೆಂಗಳೂರು, ಏ. 27– ಮನೆ ಮಾಲೀಕರು– ಬಾಡಿಗೆಗೆ ಬಯಸುವ ಅರ್ಜಿದಾರರು ಹಾಗೂ ಬಾಡಿಗೆದಾರರಿಗೆ ಕಿರುಕುಳ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯಿಸುವಂತೆ ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆಯ ಕೆಲವು ವಿಧಿಗಳನ್ನು ನಿಷ್ಕ್ರಿಯಗೊಳಿಸಿ ಅಧಿಸೂಚನೆಯನ್ನು ಹೊರಡಿಸಿದೆ.