<p><strong>ಮನೆ ಮಾಲೀಕರಿಗೆ ಸ್ವಾತಂತ್ರ್ಯ<br />ಬೆಂಗಳೂರು, ಏ. 27–</strong> ಮನೆ ಮಾಲೀಕರು– ಬಾಡಿಗೆಗೆ ಬಯಸುವ ಅರ್ಜಿದಾರರು ಹಾಗೂ ಬಾಡಿಗೆದಾರರಿಗೆ ಕಿರುಕುಳ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯಿಸುವಂತೆ ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆಯ ಕೆಲವು ವಿಧಿಗಳನ್ನು ನಿಷ್ಕ್ರಿಯಗೊಳಿಸಿ ಅಧಿಸೂಚನೆಯನ್ನು ಹೊರಡಿಸಿದೆ.</p>.<p>ಈ ಅಧಿಸೂಚನೆಯಿಂದಾಗಿ ಬಾಡಿಗೆ ನಿಯಂತ್ರಣ ಇಲಾಖೆ ಅಧಿಕಾರಿಗಳ ಬಿಗಿಮುಷ್ಟಿಯಿಂದ ಮನೆ ಮಾಲೀಕರು ಪಾರಾಗಿ ತಮಗೆ ಬೇಕಾದವರಿಗೆ ತಮ್ಮ ಮನೆಗಳನ್ನು ಬಾಡಿಗೆಗೆ ಕೊಡಲು ಅವಕಾಶ ಸಿಗುವುದಲ್ಲದೆ, ಸಾರ್ವಜನಿಕರು ನೇರವಾಗಿ ಮನೆಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.</p>.<p><strong>‘ರೈಲು ಪ್ರಯಾಣಿಕರಿಗೆ ವಂಚನೆ’<br />ರಾಯಚೂರು, ಏ. 27–</strong> ಬೆಂಗಳೂರು ಹಾಗೂ ರಾಯಚೂರು ನಡುವಿನ ವಾಸ್ತವಿಕ ಅಂತರ 418 ಕಿ.ಮೀ. ಆಗಿದ್ದರೂ 498 ಕಿ.ಮೀ.ಗೆ ಪ್ರಯಾಣದರವನ್ನು ವಸೂಲು ಮಾಡುತ್ತಿರುವ ರೈಲ್ವೆ ಇಲಾಖೆ ಕಳೆದ 12 ವರ್ಷಗಳಲ್ಲಿ ಹಲವಾರು ಕೋಟಿ ರೂಪಾಯಿಯನ್ನು ತನ್ನ ಗ್ರಾಹಕರಿಗೆ ವಂಚಿಸಿರುವ ಭಾರೀ ಹಗರಣವೊಂದು ಬೆಳಕಿಗೆ ಬಂದಿದೆ.</p>.<p>ಗುಂತಕಲ್ನಿಂದ ಮುಂದಕ್ಕೆ ಬೆಂಗಳೂರಿನವರೆಗೆ ಬ್ರಾಡ್ಗೇಜ್ ಇನ್ನೂ ಪರಿವರ್ತನೆಯಾಗಿರದ 1983ಕ್ಕೆ ಮುಂಚೆ ಬೆಂಗಳೂರು– ರಾಯಚೂರು ನಡುವಿನ ಅಂತರ 498ಕಿ.ಮೀ. ಇತ್ತು. ಬ್ರಾಡ್ಗೇಜ್ ಪರಿವರ್ತನೆಯ ಬಳಿಕ ಪ್ರಯಾಣದ ದೂರವು 80 ಕಿ.ಮೀ.ನಷ್ಟು ತಗ್ಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮನೆ ಮಾಲೀಕರಿಗೆ ಸ್ವಾತಂತ್ರ್ಯ<br />ಬೆಂಗಳೂರು, ಏ. 27–</strong> ಮನೆ ಮಾಲೀಕರು– ಬಾಡಿಗೆಗೆ ಬಯಸುವ ಅರ್ಜಿದಾರರು ಹಾಗೂ ಬಾಡಿಗೆದಾರರಿಗೆ ಕಿರುಕುಳ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯಿಸುವಂತೆ ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆಯ ಕೆಲವು ವಿಧಿಗಳನ್ನು ನಿಷ್ಕ್ರಿಯಗೊಳಿಸಿ ಅಧಿಸೂಚನೆಯನ್ನು ಹೊರಡಿಸಿದೆ.</p>.<p>ಈ ಅಧಿಸೂಚನೆಯಿಂದಾಗಿ ಬಾಡಿಗೆ ನಿಯಂತ್ರಣ ಇಲಾಖೆ ಅಧಿಕಾರಿಗಳ ಬಿಗಿಮುಷ್ಟಿಯಿಂದ ಮನೆ ಮಾಲೀಕರು ಪಾರಾಗಿ ತಮಗೆ ಬೇಕಾದವರಿಗೆ ತಮ್ಮ ಮನೆಗಳನ್ನು ಬಾಡಿಗೆಗೆ ಕೊಡಲು ಅವಕಾಶ ಸಿಗುವುದಲ್ಲದೆ, ಸಾರ್ವಜನಿಕರು ನೇರವಾಗಿ ಮನೆಗಳನ್ನು ಬಾಡಿಗೆಗೆ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.</p>.<p><strong>‘ರೈಲು ಪ್ರಯಾಣಿಕರಿಗೆ ವಂಚನೆ’<br />ರಾಯಚೂರು, ಏ. 27–</strong> ಬೆಂಗಳೂರು ಹಾಗೂ ರಾಯಚೂರು ನಡುವಿನ ವಾಸ್ತವಿಕ ಅಂತರ 418 ಕಿ.ಮೀ. ಆಗಿದ್ದರೂ 498 ಕಿ.ಮೀ.ಗೆ ಪ್ರಯಾಣದರವನ್ನು ವಸೂಲು ಮಾಡುತ್ತಿರುವ ರೈಲ್ವೆ ಇಲಾಖೆ ಕಳೆದ 12 ವರ್ಷಗಳಲ್ಲಿ ಹಲವಾರು ಕೋಟಿ ರೂಪಾಯಿಯನ್ನು ತನ್ನ ಗ್ರಾಹಕರಿಗೆ ವಂಚಿಸಿರುವ ಭಾರೀ ಹಗರಣವೊಂದು ಬೆಳಕಿಗೆ ಬಂದಿದೆ.</p>.<p>ಗುಂತಕಲ್ನಿಂದ ಮುಂದಕ್ಕೆ ಬೆಂಗಳೂರಿನವರೆಗೆ ಬ್ರಾಡ್ಗೇಜ್ ಇನ್ನೂ ಪರಿವರ್ತನೆಯಾಗಿರದ 1983ಕ್ಕೆ ಮುಂಚೆ ಬೆಂಗಳೂರು– ರಾಯಚೂರು ನಡುವಿನ ಅಂತರ 498ಕಿ.ಮೀ. ಇತ್ತು. ಬ್ರಾಡ್ಗೇಜ್ ಪರಿವರ್ತನೆಯ ಬಳಿಕ ಪ್ರಯಾಣದ ದೂರವು 80 ಕಿ.ಮೀ.ನಷ್ಟು ತಗ್ಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>