ನವದೆಹಲಿ, ಮೇ 17– ಹಲವಾರು ಬಾರಿ ಒಡಕನ್ನು ಎದುರಿಸಿರುವ, 110 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಮತ್ತೆ ಒಡೆಯುವ ಹಾದಿ ಹಿಡಿದಿದೆ. ಉಚ್ಚಾಟಿತ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರ ನೇತೃತ್ವದ ಭಿನ್ನಮತೀಯರ ಗುಂಪು ಮುಂದಿನ ಶುಕ್ರವಾರ ಇಲ್ಲಿ ನಡೆಸಲಿರುವ ರಾಷ್ಟ್ರಮಟ್ಟದ ‘ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ’ದಿಂದ ಮತ್ತೊಂದು ಕಾಂಗ್ರೆಸ್ ಆಗುವ ಸಂಭವ ಸ್ಪಷ್ಟವಾಗಿ ಕಾಣುತ್ತಿದೆ.