<p><strong>ಕೇಂದ್ರಕ್ಕೆ ಕರುಣಾಕರನ್, ಅಂತುಳೆ, ಡಾ. ಮಿಶ್ರಾ ಸೇರ್ಪಡೆ ಸಂಭವ</strong></p>.<p><strong>ನವದೆಹಲಿ, ಜೂನ್ 9:</strong>ಬಹಳ ದಿನಗಳಿಂದ ನಿರೀಕ್ಷಿಸಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ರಾಜ್ಯಸಭೆಗೆ ಇತ್ತೀಚೆಗೆ ಆಯ್ಕೆಯಾದ ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್,ಅಬ್ದುಲ್ ರೆಹಮಾನ್ ಅಂತುಳೆ ಮತ್ತು ಡಾ. ಜಗನ್ನಾಥ್ ಮಿಶ್ರಾ ಅವರು ಸಂಪುಟ ಸೇರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.</p>.<p>ಸಿಬ್ಬಂದಿ, ಸಂಸದೀಯ ವ್ಯವಹಾರ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವೆ ಮಾರ್ಗರೇಟ್ ಆಳ್ವ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ಸಿಗುವುದಾಗಿ ಹೇಳಲಾಗುತ್ತಿದೆ.</p>.<p><strong>ಬಹುಗುಣ ಬಲವಂತದಿಂದ ಆಸ್ಪತ್ರೆಗೆ</strong></p>.<p><strong>ತೆಹ್ರಿ, ಜೂನ್ 9 (ಯುಎನ್ಐ):</strong>ತೆಹ್ರಿ ಅಣೆಕಟ್ಟು ಯೋಜನೆಯನ್ನು ಮರುವಿಮರ್ಶೆ ಮಾಡುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಚಿಪ್ಕೊ ನಾಯಕ ಸುಂದರ್ಲಾಲ್ ಬಹುಗುಣ ಅವರನ್ನು ಇಂದು ಮುಂಜಾನೆ ಅವರ ನಿವಾಸದಿಂದ ಪೊಲೀಸರು ಎತ್ತಿಕೊಂಡು ಹೋದರು.</p>.<p>ಆಹಾರ ಸೇವಿಸುವಂತೆ ಒತ್ತಾಯಿಸಲು ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿದೆ. ಸರ್ಕಾರಿ ಆದೇಶದ ಮೇರೆಗೆ ಬಹುಗುಣ ಅವರನ್ನು ವಿಶೇಷ ಹೆಲಿಕಾಪ್ಟರ್ನಲ್ಲಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ತೆಹ್ರಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಮಲ್ ದುಬೆ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರಕ್ಕೆ ಕರುಣಾಕರನ್, ಅಂತುಳೆ, ಡಾ. ಮಿಶ್ರಾ ಸೇರ್ಪಡೆ ಸಂಭವ</strong></p>.<p><strong>ನವದೆಹಲಿ, ಜೂನ್ 9:</strong>ಬಹಳ ದಿನಗಳಿಂದ ನಿರೀಕ್ಷಿಸಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ರಾಜ್ಯಸಭೆಗೆ ಇತ್ತೀಚೆಗೆ ಆಯ್ಕೆಯಾದ ಕೇರಳದ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್,ಅಬ್ದುಲ್ ರೆಹಮಾನ್ ಅಂತುಳೆ ಮತ್ತು ಡಾ. ಜಗನ್ನಾಥ್ ಮಿಶ್ರಾ ಅವರು ಸಂಪುಟ ಸೇರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.</p>.<p>ಸಿಬ್ಬಂದಿ, ಸಂಸದೀಯ ವ್ಯವಹಾರ ಮತ್ತು ಸಾರ್ವಜನಿಕ ಕುಂದುಕೊರತೆಗಳ ರಾಜ್ಯ ಸಚಿವೆ ಮಾರ್ಗರೇಟ್ ಆಳ್ವ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ಸಿಗುವುದಾಗಿ ಹೇಳಲಾಗುತ್ತಿದೆ.</p>.<p><strong>ಬಹುಗುಣ ಬಲವಂತದಿಂದ ಆಸ್ಪತ್ರೆಗೆ</strong></p>.<p><strong>ತೆಹ್ರಿ, ಜೂನ್ 9 (ಯುಎನ್ಐ):</strong>ತೆಹ್ರಿ ಅಣೆಕಟ್ಟು ಯೋಜನೆಯನ್ನು ಮರುವಿಮರ್ಶೆ ಮಾಡುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಚಿಪ್ಕೊ ನಾಯಕ ಸುಂದರ್ಲಾಲ್ ಬಹುಗುಣ ಅವರನ್ನು ಇಂದು ಮುಂಜಾನೆ ಅವರ ನಿವಾಸದಿಂದ ಪೊಲೀಸರು ಎತ್ತಿಕೊಂಡು ಹೋದರು.</p>.<p>ಆಹಾರ ಸೇವಿಸುವಂತೆ ಒತ್ತಾಯಿಸಲು ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿದೆ. ಸರ್ಕಾರಿ ಆದೇಶದ ಮೇರೆಗೆ ಬಹುಗುಣ ಅವರನ್ನು ವಿಶೇಷ ಹೆಲಿಕಾಪ್ಟರ್ನಲ್ಲಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ತೆಹ್ರಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಮಲ್ ದುಬೆ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>