ಬೆಂಗಳೂರು, ಡಿ. 17– ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ನೀರಾವರಿ ಖಾತೆಯನ್ನು ಪ್ರಮುಖವಾಗಿ ತಮ್ಮಲ್ಲಿರಿಸಿಕೊಂಡು ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರಿಗೆ ವಿದ್ಯುತ್ ಜವಾಬ್ದಾರಿ ನೀಡಿ ತಮ್ಮ ನೆಚ್ಚಿನ ಶಿಷ್ಯ ಪಿ.ಜಿ.ಆರ್. ಸಿಂಧ್ಯ ಅವರಿಗೆ ಗೃಹ ಖಾತೆ ನೀಡಿದ್ದು, ಕಂದಾಯ ಹೊಣೆಯನ್ನು ಆರ್.ಎಲ್. ಜಾಲಪ್ಪ ಅವರಿಗೆ ಕೊಟ್ಟು, ಹಣಕಾಸಿನ ಖಾತೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ.