ಶೂನ್ಯ ವೇಳೆಯಲ್ಲಿ ಈ ಗದ್ದಲ ಉಂಟಾದ ಬಳಿಕ ಹೇಳಿಕೆ ನೀಡಿದ ಜಲಸಂಪನ್ಮೂಲ ಸಚಿವ ವಿದ್ಯಾಚರಣ ಶುಕ್ಲಾ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಈಗ ನ್ಯಾಯಮಂಡಲಿಯ ಮುಂದಿದೆ. ನ್ಯಾಯಮಂಡಲಿಯು ತನ್ನ ಅಂತಿಮ ತೀರ್ಪು ನೀಡುವವರೆಗೆ, ಪ್ರಕಟಿಸಿರುವ ಮಧ್ಯಂತರ ವರದಿಯ ಜಾರಿಗೆ ಎಲ್ಲರೂ ಬದ್ಧವಾಗಬೇಕಾಗಿದೆ. ನ್ಯಾಯಮಂಡಲಿ ಆದಷ್ಟು ಬೇಗ ತನ್ನ ಅಂತಿಮ ತೀರ್ಪು ನೀಡುವುದು ಎಂಬುದು ಕೇಂದ್ರ ಸರ್ಕಾರದ ನಿರೀಕ್ಷೆ ಎಂದರು.