ಈ ಮಧ್ಯೆ ಹಣಕಾಸು ಸಚಿವ ಡಾ. ಮನಮೋಹನ ಸಿಂಗ್ ಅವರು ಇಲ್ಲಿ ಜರುಗಿದ ಆರ್ಥಿಕ ಪತ್ರಿಕೆಗಳ ಸಂಪಾದಕರ ಸಭೆಯಲ್ಲಿ ಮಾತನಾಡುತ್ತಾ, ವಿದ್ಯುತ್, ದೂರವಾಣಿ ಹಾಗೂ ಪೆಟ್ರೋಲಿಯಂ ರಂಗಗಳ ಬೃಹತ್ ಯೋಜನೆಗಳಿಗೆ ಖಾಸಗಿಯವರನ್ನು ಆಹ್ವಾನಿಸುವಾಗ ಬರುವ ಭ್ರಷ್ಟಾಚಾರದ ಆರೋಪಗಳನ್ನು ನಿವಾರಿಸಲು ಇಂತಹ ವ್ಯವಸ್ಥೆ ಅಗತ್ಯ ಎಂದು ಪ್ರತಿಪಾದಿಸಿದರು.