ನವದೆಹಲಿ, ಅ. 16 (ಪಿಟಿಐ, ಯುಎನ್ಐ)– ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಂಕರಾಚಾರ್ಯರುಗಳನ್ನು ಒಳಗೊಂಡ ಒಂಬತ್ತು ಸದಸ್ಯರ ರಾಜಕೀಯೇತರ ಟ್ರಸ್ಟ್ ರಚನೆ ಸಾಕಷ್ಟು ವಿವಾದ ಹುಟ್ಟಿಸಿದ್ದು, ಹಲವು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ನಾಯಕರು ಇದನ್ನು ‘ಸರ್ಕಾರಿ ಪ್ರೇರಿತ ತಂತ್ರ’ ಎಂದು ಟೀಕಿಸಿದ್ದಾರೆ.