<p><strong>ಪ್ರತಿಭಟನೆ ಅಬ್ಬರದ ಮಧ್ಯೆ ಸಮರೋಪಾದಿ ಕ್ರೀಡಾಗ್ರಾಮ ನಿರ್ಮಾಣ<br />ಬೆಂಗಳೂರು, ಮಾರ್ಚಿ 10–</strong> ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳು ಹಾಗೂ ಇತರ ಗಣ್ಯರ ‘ಆತಿಥ್ಯ’ಕ್ಕಾಗಿ ಬೆಂಗಳೂರಿನ ಕೋರಮಂಗಲದ ಕೆರೆಯಂಗಳ ಸಜ್ಜುಗೊಳ್ಳುತ್ತಿದೆ. ಹಲವು ಬಗೆಯ ಅನುಮಾನ– ಅಪಸ್ವರಗಳ ಮಧ್ಯೆಯೂ ಈ ‘ಕ್ರೀಡಾಗ್ರಾಮ’ದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.</p>.<p>ಈ ಬಹುಮಹಡಿ ಕ್ರೀಡಾ ವಸತಿ ಸಮುಚ್ಚಯ ನಿರ್ಮಾಣ ಕಾರ್ಯದ ಗುತ್ತಿಗೆ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಭಾರತೀಯ ಜನತಾ ಪಕ್ಷದ ಮುಖಂಡರ ಪ್ರತಿಭಟನೆಯ ಅಬ್ಬರದಷ್ಟೇ ಜೋರಾಗಿ ನಿರ್ಮಾಣ ಕೆಲಸವೂ ನಡೆದಿದೆ.</p>.<p><strong>ಪಾಲಿಕೆ, ಪುರಸಭೆಗಳಿಗೆ ಆಡಳಿತಾಧಿಕಾರಿ ಸಂಭವ<br />ಬೆಂಗಳೂರು, ಮಾರ್ಚಿ 10–</strong> ರಾಜ್ಯದ ಬಹುತೇಕ ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಅಧಿಕಾರಾವಧಿ ಏಪ್ರಿಲ್ ತಿಂಗಳಿಗೆ ಮುಗಿಯಲಿದ್ದು, ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಭವವಿದೆ.</p>.<p>ಬೆಂಗಳೂರು ಮಹಾ ನಗರಪಾಲಿಕೆಯನ್ನು ವಿಸರ್ಜಿಸಿ ಏಪ್ರಿಲ್ 1ರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ರೋಷನ್ ಬೇಗ್ ಅವರು ಇಂದು ಇಲ್ಲಿ ಹೇಳಿರುವ ಹಿನ್ನೆಲೆಯಲ್ಲಿ, ಉಳಿದ ಎಲ್ಲ ಪುರಸಭೆ ಹಾಗೂ ನಗರ ಪಾಲಿಕೆಗಳಿಗೂ ಇದು ಅನ್ವಯವಾಗುವ ಸೂಚನೆಗಳಿವೆ.</p>.<p>ರಾಜ್ಯದ 170 ಪುರಸಭೆ, 19 ನಗರ ಸಭೆ, 6 ನಗರಪಾಲಿಕೆಗಳ ಅಧಿಕಾರದ ಅವಧಿ ಏಪ್ರಿಲ್ಗೆ ಮುಗಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರತಿಭಟನೆ ಅಬ್ಬರದ ಮಧ್ಯೆ ಸಮರೋಪಾದಿ ಕ್ರೀಡಾಗ್ರಾಮ ನಿರ್ಮಾಣ<br />ಬೆಂಗಳೂರು, ಮಾರ್ಚಿ 10–</strong> ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳು ಹಾಗೂ ಇತರ ಗಣ್ಯರ ‘ಆತಿಥ್ಯ’ಕ್ಕಾಗಿ ಬೆಂಗಳೂರಿನ ಕೋರಮಂಗಲದ ಕೆರೆಯಂಗಳ ಸಜ್ಜುಗೊಳ್ಳುತ್ತಿದೆ. ಹಲವು ಬಗೆಯ ಅನುಮಾನ– ಅಪಸ್ವರಗಳ ಮಧ್ಯೆಯೂ ಈ ‘ಕ್ರೀಡಾಗ್ರಾಮ’ದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.</p>.<p>ಈ ಬಹುಮಹಡಿ ಕ್ರೀಡಾ ವಸತಿ ಸಮುಚ್ಚಯ ನಿರ್ಮಾಣ ಕಾರ್ಯದ ಗುತ್ತಿಗೆ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಭಾರತೀಯ ಜನತಾ ಪಕ್ಷದ ಮುಖಂಡರ ಪ್ರತಿಭಟನೆಯ ಅಬ್ಬರದಷ್ಟೇ ಜೋರಾಗಿ ನಿರ್ಮಾಣ ಕೆಲಸವೂ ನಡೆದಿದೆ.</p>.<p><strong>ಪಾಲಿಕೆ, ಪುರಸಭೆಗಳಿಗೆ ಆಡಳಿತಾಧಿಕಾರಿ ಸಂಭವ<br />ಬೆಂಗಳೂರು, ಮಾರ್ಚಿ 10–</strong> ರಾಜ್ಯದ ಬಹುತೇಕ ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಅಧಿಕಾರಾವಧಿ ಏಪ್ರಿಲ್ ತಿಂಗಳಿಗೆ ಮುಗಿಯಲಿದ್ದು, ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಭವವಿದೆ.</p>.<p>ಬೆಂಗಳೂರು ಮಹಾ ನಗರಪಾಲಿಕೆಯನ್ನು ವಿಸರ್ಜಿಸಿ ಏಪ್ರಿಲ್ 1ರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ರೋಷನ್ ಬೇಗ್ ಅವರು ಇಂದು ಇಲ್ಲಿ ಹೇಳಿರುವ ಹಿನ್ನೆಲೆಯಲ್ಲಿ, ಉಳಿದ ಎಲ್ಲ ಪುರಸಭೆ ಹಾಗೂ ನಗರ ಪಾಲಿಕೆಗಳಿಗೂ ಇದು ಅನ್ವಯವಾಗುವ ಸೂಚನೆಗಳಿವೆ.</p>.<p>ರಾಜ್ಯದ 170 ಪುರಸಭೆ, 19 ನಗರ ಸಭೆ, 6 ನಗರಪಾಲಿಕೆಗಳ ಅಧಿಕಾರದ ಅವಧಿ ಏಪ್ರಿಲ್ಗೆ ಮುಗಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>