‘ತಾತಯ್ಯ’ನವರ ಆದರ್ಶ, ನಿಷ್ಠೆ, ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಟಕ್ಕೆ ದಾರಿದೀಪ: ಶ್ರೀ ಗಿರಿ
ಮೈಸೂರು, ಸೆ. 19– ‘ಮೈಸೂರಿನಪತ್ರಿಕೋದ್ಯಮದ ಜನಕ, ಪ್ರಾಂತ್ಯ, ಜಾತಿ, ಮತ ಮುಂತಾದ ಸಂಕುಚಿತ ಭಾವನೆಗಳ ಪ್ರಬಲ ಶತ್ರು, ಜನರ ಪ್ರೀತಿಯ ತಾತಯ್ಯ ಶ್ರೀ ಎಂ. ವೆಂಕಟಕೃಷ್ಣಯ್ಯನವರ ರಾಷ್ಟ್ರಭಕ್ತಿ, ರಾಷ್ಟ್ರದ ಭವಿಷ್ಯದಲ್ಲಿ ಅವರು ಇಟ್ಟಿದ್ದ ನಂಬಿಕೆ ಇಂದು ನಮಗೆ ಅಗತ್ಯ. ಪ್ರಬಲಗೊಳ್ಳುತ್ತಿರುವ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಹೋರಾಟಕ್ಕೆ ತಾತಯ್ಯನವರ ಆದರ್ಶ, ಶಿಸ್ತು, ಸೇವಾಭಾವನೆ, ಕರ್ತವ್ಯ ನಿಷ್ಠೆ ನಮಗೆ ದಾರಿದೀಪವಾಗಿ ಸ್ಫೂರ್ತಿ ನೀಡಬೇಕು’ ಎಂದು ರಾಷ್ಟ್ರಪತಿ ಶ್ರೀ ವಿ.ವಿ. ಗಿರಿ ಅವರು ಇಂದು ಇಲ್ಲಿ ಕರೆ ನೀಡಿದರು.