ಲಖನೌ, ಸೆ. 13 (ಯುಎನ್ಐ, ಪಿಟಿಐ)– ರಾಜ್ಯದ ಮೀಸಲು ನೀತಿಯನ್ನು ಬೆಂಬಲಿಸಿ ಆಡಳಿತಾರೂಢ ಸಮಾಜವಾದಿ ಪಕ್ಷ– ಬಹುಜನ ಸಮಾಜ ಪಕ್ಷ ನೀಡಿದ ಬಂದ್ ಕರೆಯನ್ವಯ ಉತ್ತರ ಪ್ರದೇಶದಲ್ಲಿ ಇಂದು ಮೀಸಲಾತಿ ಪರ ಮತ್ತು ವಿರೋಧಿ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ನಾಲ್ವರು ಸತ್ತು 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ರಾಜ್ಯದಾದ್ಯಂತ ಬಂದ್ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಿಂಸಾಚಾರಕ್ಕೆ ಒಳಗಾದ ಫಿರೋಜಾಬಾದ್ ಪ್ರದೇಶದಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ.