ವರ್ತಮಾನದ ಭಾರತದಲ್ಲಿ ಚಾಲ್ತಿಯಲ್ಲಿರುವ ರಂಗುರಂಗಿನ ಕನಸುಗಳಲ್ಲಿ ‘ವಿಶ್ವಗುರು’ ಪರಿಕಲ್ಪನೆಯೂ ಒಂದು. ಗುರಿ ಚೆನ್ನಾಗಿಯೇ ಇದೆ. ಸಮಸ್ಯೆ ಇರುವುದು, ವಿಶ್ವಗುರು ಆಗುವುದಕ್ಕೆ ಅಗತ್ಯವಾದ ಇಂಧನವನ್ನು ಭೂತಕಾಲದಲ್ಲಿ ಹುಡುಕುತ್ತಿರುವುದರಲ್ಲಿ ಹಾಗೂ ಸನಾತನ ಧರ್ಮದ ವ್ಯಾಖ್ಯಾನಗಳನ್ನು ರಾಜಕೀಯ ಗೊಳಿಸಿರುವುದರಲ್ಲಿ.