‘ಸಾ, ಮಕ್ಕಳ ದಿನಾಚರಣೆಗೆ ಕೋರ್ಟು ಇವರಿಗೆ ಏನು ಕೊಟ್ಟಾದೋ ಗೊತ್ತಿಲ್ಲ. ಯಂಗಾನ ಇರಲಿ ಅಂತ ಯಡುರಪ್ಪಾರು ಜೆಡಿಎಸ್ ಜೊತೆಗೆ ಮನೋಜಯ, ಒಪ್ಪುವೀಳ್ಯ ಮಾಡಿಕ್ಯಂಡವರಂತೆ!’ ಅಂದೆ. ‘ಹ್ಞೂಂ ಕಣೊ, ಅನರ್ಹರು ಬರದಿದ್ರೆ ಜೇಡಿಎಸ್ಸು- ಬಿಜೆಪಿ ಸೇರಿ ಲಿವಿಂಗ್ ಟುಗೆದರ್ ಮಾಡಿಕ್ಯಂಡು ಬಿಜೆಡಿಯಾಯ್ತದೇನೋ? ಕಾಂಗ್ರೇಸಿಗೆ ಕಡಲೆ ಬೀಜವೇ ಗತಿ!’ ಅಂದ್ರು ತುರೇಮಣೆ.