<p>‘ಭಾರತದಲ್ಲಿ 25 ಕೋಟಿ ಬಡವರನ್ನ ಬಡತನದಿಂದ ಮ್ಯಾಲಕ್ಕೆ ತಂದುದವಿ ಅಂತ ಕೇಂದ್ರ ಸರ್ಕಾರ ಹೇಳಿಕ್ಯತಾ ಅದೆ! ಬಡತನ ಅನ್ನದ್ನ ಹ್ಯಂಗೆ ತೀರ್ಮಾನ ಮಾಡ್ತಾವ್ರೆ ಸಾ?’ ಅಂತ ಚಂದ್ರು ಕೇಳಿದ.</p><p>‘ಗ್ಯಾಸ್, ಶೌಚಾಲಯ, ನೀರು-ಕರಂಟು, ಮನೆ ತಗಂಡಿರ ನೀವು ಬಡವರಲ್ಲ!’ ಅಂತಂದ್ರೆ ಹ್ಯಂಗೆ ಸಾ? ಮಂತನಸ್ಥರು ಒಪ್ಪೋ ಮಾತ ಇದು?’ ಅಂತ ತುರೇಮಣೆಗೆ ಕೇಳಿದೆ.</p><p>‘ಅಲ್ಲ ಕನ್ರೋ ಬಡವರಿಗು-ಸಾವ್ಕಾರ<br>ರಿಗೂ ಸಾಮಾಜಿಕ, ಆರ್ಥಿಕ ಅಂತರವೇ ಜಾಸ್ತಿ ಅದಲ್ಲೋ?’ ತುರೇಮಣೆ ಪ್ರಶ್ನೆ ಮಾಡಿದರು.</p><p>‘ಸಮಾಜದಲ್ಲಿ ಬಡವರು- ಭಂಡರು ಅಂತ ಎರಡು ವರ್ಗ ಅದೆ ಸಾ. ಅಪೌಷ್ಟಿಕತೆ, ರಕ್ತಹೀನತೆ ಇರೋರು, ಕೈಲಿ ಕಾಸಿಲ್ದೋರು ನಿಜವಾದ ಬಡವರು. ಅಂಕೆ-ಶಂಕೆ ಇಲ್ಲದೆ ಕಾಸು ಮಾಡೋ ಭಂಡರಲ್ಲಿ ಕುಪೌಷ್ಟಿಕತೆ, ರಕ್ತದಾಹ ಜಾಸ್ತಿ ಇರುತ್ತೆ’ ಅಂತಂದೆ.</p><p>‘ಬೊಡ್ಡಿಹೈದ್ನೆ ಸ್ಯಾನೆ ಬುದುವಂತಾಗಿದ್ದೀಯ! ಭಂಡರ ವರ್ಗದಲ್ಲಿ ಯಾರ್ಯಾರು ಕುಂತವ್ರೆ ಹೇಳ್ಲಾ?’ ಅಂತ ಪ್ರಶ್ನೆ ಹಾಕಿದರು.</p><p>‘ಭಂಡರಲ್ಲಿ ದಿನಾ ಕಾಸು ಮಾಡೋ ಪುಡಿ ರೋಜುಗಾರ್ ಭಂಡರು, ಅಲಾಯಿದವಾಗಿ ಬಂದ ಕಾಸು ಉಡಾಯಿಸೊ ಮೋಜುಗಾರ ಭಂಡರು. ಮಿನಿಸ್ಟರು, ಎಂಎಲ್ಎ, ಎಂಪಿಯಂತಾ ಅಡವಾದ ಜಾಗಕ್ಕೆ ಕಾಸು ಕಟ್ಟಿ ಅಧಿಕಾರ ಹೊಡೆಯೋ ಜೂಜುಗಾರ ಭಂಡರು ಇರತರೆ’ ಅಂತಂದೆ.</p><p>‘ಭೇಷ್ ಕಲಾ. ಆಮೇಲೆ!’ ಅಂತ ತುರೇಮಣೆ ಬೆನ್ನು ತಟ್ಟಿದರು.</p><p>‘ಸಾ ಇಂತಾ ಭಂಡರು ಯಾವಾಗಲೂ ಬಿಪಿಎಲ್ ಅಂದ್ರೆ ಬಿಲೋ ಪ್ರಾಪರ್ಟಿ ಲಿಸ್ಟಲ್ಲೇ ಇರತರೆ. ತಮ್ಮ ಹೆಸರಲ್ಲಿ ಒಂದೂ ಕಾರು, ಬೈಕು, ಮನೆ ಇಲ್ಲ. ಬರೀ ಸಾಲವೇ ಅದೆ ಅಂತ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡ್ತರೆ’ ಅಂತ ವಿವರಿಸಿದೆ.</p><p>‘ಇವರ ಹೆಂಡ್ರು, ಮಕ್ಕಳು, ಸೊಸೆಯರಿಗೆ ಮಾತ್ರ ಎಲೆಕ್ಷನ್ನಿಗೆ ನಿಲ್ಲೋ ಯೇಗ್ತೆ ಇರದು ಅಂತ್ಲೂ ಹೇಳು!’ ಅಂದು ಯಂಟಪ್ಪಣ್ಣ ಶರಾ ಬರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಾರತದಲ್ಲಿ 25 ಕೋಟಿ ಬಡವರನ್ನ ಬಡತನದಿಂದ ಮ್ಯಾಲಕ್ಕೆ ತಂದುದವಿ ಅಂತ ಕೇಂದ್ರ ಸರ್ಕಾರ ಹೇಳಿಕ್ಯತಾ ಅದೆ! ಬಡತನ ಅನ್ನದ್ನ ಹ್ಯಂಗೆ ತೀರ್ಮಾನ ಮಾಡ್ತಾವ್ರೆ ಸಾ?’ ಅಂತ ಚಂದ್ರು ಕೇಳಿದ.</p><p>‘ಗ್ಯಾಸ್, ಶೌಚಾಲಯ, ನೀರು-ಕರಂಟು, ಮನೆ ತಗಂಡಿರ ನೀವು ಬಡವರಲ್ಲ!’ ಅಂತಂದ್ರೆ ಹ್ಯಂಗೆ ಸಾ? ಮಂತನಸ್ಥರು ಒಪ್ಪೋ ಮಾತ ಇದು?’ ಅಂತ ತುರೇಮಣೆಗೆ ಕೇಳಿದೆ.</p><p>‘ಅಲ್ಲ ಕನ್ರೋ ಬಡವರಿಗು-ಸಾವ್ಕಾರ<br>ರಿಗೂ ಸಾಮಾಜಿಕ, ಆರ್ಥಿಕ ಅಂತರವೇ ಜಾಸ್ತಿ ಅದಲ್ಲೋ?’ ತುರೇಮಣೆ ಪ್ರಶ್ನೆ ಮಾಡಿದರು.</p><p>‘ಸಮಾಜದಲ್ಲಿ ಬಡವರು- ಭಂಡರು ಅಂತ ಎರಡು ವರ್ಗ ಅದೆ ಸಾ. ಅಪೌಷ್ಟಿಕತೆ, ರಕ್ತಹೀನತೆ ಇರೋರು, ಕೈಲಿ ಕಾಸಿಲ್ದೋರು ನಿಜವಾದ ಬಡವರು. ಅಂಕೆ-ಶಂಕೆ ಇಲ್ಲದೆ ಕಾಸು ಮಾಡೋ ಭಂಡರಲ್ಲಿ ಕುಪೌಷ್ಟಿಕತೆ, ರಕ್ತದಾಹ ಜಾಸ್ತಿ ಇರುತ್ತೆ’ ಅಂತಂದೆ.</p><p>‘ಬೊಡ್ಡಿಹೈದ್ನೆ ಸ್ಯಾನೆ ಬುದುವಂತಾಗಿದ್ದೀಯ! ಭಂಡರ ವರ್ಗದಲ್ಲಿ ಯಾರ್ಯಾರು ಕುಂತವ್ರೆ ಹೇಳ್ಲಾ?’ ಅಂತ ಪ್ರಶ್ನೆ ಹಾಕಿದರು.</p><p>‘ಭಂಡರಲ್ಲಿ ದಿನಾ ಕಾಸು ಮಾಡೋ ಪುಡಿ ರೋಜುಗಾರ್ ಭಂಡರು, ಅಲಾಯಿದವಾಗಿ ಬಂದ ಕಾಸು ಉಡಾಯಿಸೊ ಮೋಜುಗಾರ ಭಂಡರು. ಮಿನಿಸ್ಟರು, ಎಂಎಲ್ಎ, ಎಂಪಿಯಂತಾ ಅಡವಾದ ಜಾಗಕ್ಕೆ ಕಾಸು ಕಟ್ಟಿ ಅಧಿಕಾರ ಹೊಡೆಯೋ ಜೂಜುಗಾರ ಭಂಡರು ಇರತರೆ’ ಅಂತಂದೆ.</p><p>‘ಭೇಷ್ ಕಲಾ. ಆಮೇಲೆ!’ ಅಂತ ತುರೇಮಣೆ ಬೆನ್ನು ತಟ್ಟಿದರು.</p><p>‘ಸಾ ಇಂತಾ ಭಂಡರು ಯಾವಾಗಲೂ ಬಿಪಿಎಲ್ ಅಂದ್ರೆ ಬಿಲೋ ಪ್ರಾಪರ್ಟಿ ಲಿಸ್ಟಲ್ಲೇ ಇರತರೆ. ತಮ್ಮ ಹೆಸರಲ್ಲಿ ಒಂದೂ ಕಾರು, ಬೈಕು, ಮನೆ ಇಲ್ಲ. ಬರೀ ಸಾಲವೇ ಅದೆ ಅಂತ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡ್ತರೆ’ ಅಂತ ವಿವರಿಸಿದೆ.</p><p>‘ಇವರ ಹೆಂಡ್ರು, ಮಕ್ಕಳು, ಸೊಸೆಯರಿಗೆ ಮಾತ್ರ ಎಲೆಕ್ಷನ್ನಿಗೆ ನಿಲ್ಲೋ ಯೇಗ್ತೆ ಇರದು ಅಂತ್ಲೂ ಹೇಳು!’ ಅಂದು ಯಂಟಪ್ಪಣ್ಣ ಶರಾ ಬರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>