<p>‘ಪದ್ದೀ, ಇವತ್ತು ಶುಕ್ರವಾರ. ದೇವಿ ದರ್ಶನ ಮಾಡಿಕೊಂಡು ಬಂದುಬಿಡ್ತೀನಿ, ತೆಂಗಿನಕಾಯನ್ನ ಬುಟ್ಟಿಗೆ ಹಾಕ್ಕೊಡು’.</p>.<p>‘ತೆಂಗಿನಕಾಯೀ? ನಿಮ್ ತಲೆಕಾಯಲ್ಲಿ ಏನು ತುಂಬಿಕೊಂಡಿದ್ದೀರಾ? ಅದ್ನೆಲ್ಲ ಒಳಗೆ ಬಿಡಲ್ಲಾರೀ’.</p>.<p>‘ಹೌದಾ? ಹೋಗಲಿ ಒಂದು ಬುಟ್ಟಿ ಕೊಡು. ಹೂವು, ಬಾಳೇಹಣ್ಣನ್ನಾದ್ರೂ ತಗೊಂಡು ಹೋಗ್ತೀನಿ’.</p>.<p>‘ಆಹಹಹಹ! ಹೌದಾಂತ ಗಿಣಿ ಕೇಳಿದ ಹಾಗೆ ಕೇಳ್ತೀರಲ್ರೀ. ಬೆಳಗಾಗೆದ್ದು ಎರಡು ಗಂಟೆ ಪೇಪರ್ ಹಿಡಕೊಂಡು, ಪತ್ರಿಕೆಯ ಹೆಸರಿನಿಂದ ಹಿಡಿದು ಪ್ರಿಂಟೆಡ್ ಅಂಡ್ ಪಬ್ಲಿಷ್ಡ್ ಬೈವರೆಗೂ ಓದ್ತೀರಾ. ತಲೆಗೆ ಹೋಗಲಿಲ್ವಾ ಈ ವಿಷಯ?’ ತಲೆ ತಲೆ ಚಚ್ಚಿಕೊಂಡ ಶಬ್ದವೇ ಅವಳ ಉತ್ತರವಾಯಿತು.</p>.<p>‘ಹೋಗಲಿ ಒಂದು ಕರ್ಪೂರ?’ ಹೆದರಿ ಹೆದರುತ್ತಲೇ ಕೇಳಿದೆ.</p>.<p>‘ಯಾವುದೂ ಇಲ್ಲಾರೀ. ಬರೀಕೈಲಿ ಹೋಗಬೇಕೂರೀ. ಮಾಸ್ಕ್ ಒಂದು ಹಾಕ್ಕೋಬೇಕಷ್ಟೆ’ ಅಂತಂದು ‘ದೇವರು ನಿಮಗೆ ಅದು ಯಾವಾಗ ಬುದ್ಧಿ ಕೊಡ್ತಾನೋ ಅವನಿಗೇ ಗೊತ್ತು’ ಎಂದು ಗೊಣಗಿದಳು. ತೆಪ್ಪಗಾದೆ ಬೇರೆ ಮಾರ್ಗವಿಲ್ಲದೆ.</p>.<p>ಎರಡು ಮೂರು ನಿಮಿಷ ಕಳೀತು. ಕೇಳಲೋ ಬೇಡವೋ ಅನ್ನೋ ಅನುಮಾನದಿಂದಲೇ ಧೈರ್ಯ ಮಾಡಿ ‘ಎರಡು ಡಬ್ಬೀನಾದರೂ ಕೊಡು. ಪಂಚಾಮೃತ ಪ್ರಸಾದಾನ್ನ ಹಾಕಿಸಿಕೊಂಡು ಬರ್ತೀನಿ’ ಅಂತ ಕೇಳುತ್ತಾ ಚಪ್ಪಲಿಗಳನ್ನು ಮೆಟ್ಟಿದೆ.</p>.<p>ಸಾಕ್ಷಾತ್ ದುರ್ಗೆಯಂತೆ ನನ್ನ ಕಡೆ ನೋಡಿದಳು, ಬೆವತುಹೋದೆ. ‘ರೀ, ಪಂಚಾಮೃತಾನೂ ಇಲ್ಲ ಪ್ರಸಾದಾನೂ ಇಲ್ಲ, ಬರೀ ಮಂಗಳಾರತಿ ಅಷ್ಟೇ’ ಅಂದಳು. ನಾನು ಹಾಗೇ ಸ್ಟಿಲ್ ಆದೆ. ಹೆಜ್ಜೆಗಳನ್ನ ಇಡಲಿಲ್ಲ. ‘ಯಾಕ್ರೀ ದೇವಸ್ಥಾನಕ್ಕೆ ಹೋಗಲ್ಲವಾ?’ ಕೇಳಿದಳು.</p>.<p>‘ಇಲ್ಲೇ ಆಯ್ತಲ್ಲ ಮಂಗಳಾರತಿ. ಇನ್ನು ಅಲ್ಲೀವರೆಗೂ ಯಾಕೆ ಹೋಗಲಿ?’ ಅಂದೆ ಮೆಟ್ಟಿದ್ದ ಚಪ್ಪಲಿಗಳನ್ನು ಬಿಡುತ್ತಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪದ್ದೀ, ಇವತ್ತು ಶುಕ್ರವಾರ. ದೇವಿ ದರ್ಶನ ಮಾಡಿಕೊಂಡು ಬಂದುಬಿಡ್ತೀನಿ, ತೆಂಗಿನಕಾಯನ್ನ ಬುಟ್ಟಿಗೆ ಹಾಕ್ಕೊಡು’.</p>.<p>‘ತೆಂಗಿನಕಾಯೀ? ನಿಮ್ ತಲೆಕಾಯಲ್ಲಿ ಏನು ತುಂಬಿಕೊಂಡಿದ್ದೀರಾ? ಅದ್ನೆಲ್ಲ ಒಳಗೆ ಬಿಡಲ್ಲಾರೀ’.</p>.<p>‘ಹೌದಾ? ಹೋಗಲಿ ಒಂದು ಬುಟ್ಟಿ ಕೊಡು. ಹೂವು, ಬಾಳೇಹಣ್ಣನ್ನಾದ್ರೂ ತಗೊಂಡು ಹೋಗ್ತೀನಿ’.</p>.<p>‘ಆಹಹಹಹ! ಹೌದಾಂತ ಗಿಣಿ ಕೇಳಿದ ಹಾಗೆ ಕೇಳ್ತೀರಲ್ರೀ. ಬೆಳಗಾಗೆದ್ದು ಎರಡು ಗಂಟೆ ಪೇಪರ್ ಹಿಡಕೊಂಡು, ಪತ್ರಿಕೆಯ ಹೆಸರಿನಿಂದ ಹಿಡಿದು ಪ್ರಿಂಟೆಡ್ ಅಂಡ್ ಪಬ್ಲಿಷ್ಡ್ ಬೈವರೆಗೂ ಓದ್ತೀರಾ. ತಲೆಗೆ ಹೋಗಲಿಲ್ವಾ ಈ ವಿಷಯ?’ ತಲೆ ತಲೆ ಚಚ್ಚಿಕೊಂಡ ಶಬ್ದವೇ ಅವಳ ಉತ್ತರವಾಯಿತು.</p>.<p>‘ಹೋಗಲಿ ಒಂದು ಕರ್ಪೂರ?’ ಹೆದರಿ ಹೆದರುತ್ತಲೇ ಕೇಳಿದೆ.</p>.<p>‘ಯಾವುದೂ ಇಲ್ಲಾರೀ. ಬರೀಕೈಲಿ ಹೋಗಬೇಕೂರೀ. ಮಾಸ್ಕ್ ಒಂದು ಹಾಕ್ಕೋಬೇಕಷ್ಟೆ’ ಅಂತಂದು ‘ದೇವರು ನಿಮಗೆ ಅದು ಯಾವಾಗ ಬುದ್ಧಿ ಕೊಡ್ತಾನೋ ಅವನಿಗೇ ಗೊತ್ತು’ ಎಂದು ಗೊಣಗಿದಳು. ತೆಪ್ಪಗಾದೆ ಬೇರೆ ಮಾರ್ಗವಿಲ್ಲದೆ.</p>.<p>ಎರಡು ಮೂರು ನಿಮಿಷ ಕಳೀತು. ಕೇಳಲೋ ಬೇಡವೋ ಅನ್ನೋ ಅನುಮಾನದಿಂದಲೇ ಧೈರ್ಯ ಮಾಡಿ ‘ಎರಡು ಡಬ್ಬೀನಾದರೂ ಕೊಡು. ಪಂಚಾಮೃತ ಪ್ರಸಾದಾನ್ನ ಹಾಕಿಸಿಕೊಂಡು ಬರ್ತೀನಿ’ ಅಂತ ಕೇಳುತ್ತಾ ಚಪ್ಪಲಿಗಳನ್ನು ಮೆಟ್ಟಿದೆ.</p>.<p>ಸಾಕ್ಷಾತ್ ದುರ್ಗೆಯಂತೆ ನನ್ನ ಕಡೆ ನೋಡಿದಳು, ಬೆವತುಹೋದೆ. ‘ರೀ, ಪಂಚಾಮೃತಾನೂ ಇಲ್ಲ ಪ್ರಸಾದಾನೂ ಇಲ್ಲ, ಬರೀ ಮಂಗಳಾರತಿ ಅಷ್ಟೇ’ ಅಂದಳು. ನಾನು ಹಾಗೇ ಸ್ಟಿಲ್ ಆದೆ. ಹೆಜ್ಜೆಗಳನ್ನ ಇಡಲಿಲ್ಲ. ‘ಯಾಕ್ರೀ ದೇವಸ್ಥಾನಕ್ಕೆ ಹೋಗಲ್ಲವಾ?’ ಕೇಳಿದಳು.</p>.<p>‘ಇಲ್ಲೇ ಆಯ್ತಲ್ಲ ಮಂಗಳಾರತಿ. ಇನ್ನು ಅಲ್ಲೀವರೆಗೂ ಯಾಕೆ ಹೋಗಲಿ?’ ಅಂದೆ ಮೆಟ್ಟಿದ್ದ ಚಪ್ಪಲಿಗಳನ್ನು ಬಿಡುತ್ತಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>