‘ಅಯ್ಯೋ ದೇಶಾನೂ ಇಲ್ಲ, ಭಕ್ತೀನೂ ಇಲ್ಲ. ಮೊನ್ನೆ ಮಗಳ ಮದುವೆ ಫಿಕ್ಸ್ ಆಯ್ತು. ಸಿಂಪಲ್ಲಾಗೇ ಮಾಡಬೇಕು ಅಂತ ಇವರ ಹಟ. ಮೊಮ್ಮಗಳ ಮದುವೆ ನಾವಂದಂಗೇ ಆಗಬೇಕು ಅಂತ ನಮ್ಮಪ್ಪ ಖಡಕ್ ಆಗಿ ಅಂದ್ರು. ಅದುಕ್ಕೆ ಇವರು ಸಿಟ್ಟುಕೊಂಡು ಹಾಲು-ತರಕಾರಿ ತರತಿಲ್ಲ, ನೀರು ಸೇದಿ ಹಾಕ್ದೇ ಸೇಡು ತೀರಿಸಿಕೊಳತಾವರೆ’ ಅಂತ ಕಣ್ಣಿಗೆ ಕೈಯಿಟ್ಟರು. ಮೂರ್ತಿಯನ್ನೇ ಕೇಳಿದೆ ‘ಏನ್ಲಾ ಇದು ಭಯೋತ್ಪಾದನೇ, ಮಾವನ ಹಕ್ಕುಗಳು?’ ಅಂತ.