ಉಪಸಮರದ ರಣಕಹಳೆ ಮೊಳಗಿತ್ತು. ಸಿದ್ದರಾಮ ಪ್ರಭು, ಕುಮಾರದೇವ ರಾಜರು ಸಮರ ಸಾರಿದ್ದರು. 15 ಪ್ರಾಂತಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ, ಸಿಂಹಾಸನ ಭದ್ರಪಡಿಸಿ ಕೊಳ್ಳುವ ಜೊತೆಗೆ, ತಮಗೆ ಅಂಟಿರುವ ಆಪರೇಷನ್ ಅಪವಾದದಿಂದ ಮುಕ್ತರಾಗಿ ಸ್ವಂತ ಬಲದ ಮೇಲೆ ಸಾಮ್ರಾಜ್ಯ ಕಟ್ಟುವ ಅನಿವಾರ್ಯ ಮಹಾರಾಜರಿಗೆ ಎದುರಾಗಿತ್ತು.